ಕಾಸರಗೋಡು, ಏ.28 (DaijiworldNews/MB) : ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಆರಂಭಿಸಲು ಜಿಲ್ಲಾ ಪಂಚಾಯತ್ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಚಟ್ಟಂಚಾಲ್ನ ಕೈಗಾರಿಕಾ ಪ್ರಾಂಗಣದಲ್ಲಿ ಪ್ಲಾಂಟ್ ನಿರ್ಮಾಣವಾಗಲಿದೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಈ ಪ್ಲಾಂಟ್ ನಿರ್ಮಾಣಗೊಳ್ಳಲಿದ್ದು, ಅಗತ್ಯವಾದ ಸ್ಥಳ ಹಾಗೂ 50 ಲಕ್ಷ ರೂ. ಅನುದಾನವನ್ನು ಜಿಲ್ಲಾ ಪಂಚಾಯತ್ ಮಂಜೂರು ಮಾಡಲಿದೆ.
ಬುಧವಾರ ನಡೆದ ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ಗಳು ತಲಾ ಮೂರು ಲಕ್ಷ ರೂ. ಬ್ಲಾಕ್ ಪಂಚಾಯತ್ ಮತ್ತು ನಗರಸಭೆ ತಲಾ ಐದು ಲಕ್ಷ ರೂ. ಮೀಸಲಿಡಲಿದೆ.