ಮಂಗಳೂರು, ಎ.28 (DaijiworldNews/PY): ಲಾಕ್ಡೌನ್ನ ಸಂದರ್ಭ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಿದ್ದು, ಈ ಹಿನ್ನೆಲೆ ಜಿಲ್ಲೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.
ಎಪ್ರಿಲ್ 28ರ ಬುಧವಾರ ಬೆಳಗ್ಗೆ ಜನರು ತರಕಾರಿ-ಹಣ್ಣು, ಹಾಲು, ಮಾಂಸ ಹಾಗೂ ಇತ್ಯಾದಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಇನ್ನು, ಹೆಚ್ಚಿನ ರಸ್ತೆಗಳಲ್ಲಿ ಸಂಚಾರ ವಿರಳವಾಗಿದ್ದು, ದಿನನಿತ್ಯದಂತೆ ರಸ್ತೆಗಳಲ್ಲಿ ಜನಸಂದಣಿ ಇರಲಿಲ್ಲ. ಖಾಸಗಿ ಬಸ್ಸುಗಳು ಹಾಗೂ ಆಟೋ ರಿಕ್ಷಾಗಳು ಕೂಡಾ ರಸ್ತೆಗಿಳಿದಿಲ್ಲ. ಹಾಗೂ ಸರ್ಕಾರಿ ಬಸ್ಗಳ ಸಂಚಾರ ಕೂಡಾ ಬಂದ್ ಆಗಿತ್ತು.
ಜಿಲ್ಲೆಯಲ್ಲಿ ಜನರ, ವಾಹನಗಳ ಓಡಾಟ ನಿರ್ಬಂಧಿಸಲು ಒಟ್ಟು 85 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ.