ಮಂಗಳೂರು, ಏ 28 (DaijiworldNews/MS): ನಗರದ ಹೊರವಲಯದ ಅಡ್ಯಾರ್ ಬಳಿ 2019ರ ಫೆಬ್ರವರಿಯಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಹಣ ಸುಲಿಗೆ ಪ್ರಕರಣದ ಅಪರಾಧಿಗೆ ನ್ಯಾಯಾಲಯ 12 ವರ್ಷ ಕಠಿಣ ಸಜೆ ಹಾಗೂ 1.10 ಲ.ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನಗರದ ಹೆಚ್ಚುವರಿ ಸತ್ರ ಹಾಗೂ ಎಫ್ ಟಿ ಎಸ್ ಸಿ ಐ(ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು ಪ್ರಕರಣದ ಅಪರಾಧಿ ವಳಚ್ಚಿಲ್ ಪದವಿನ ನಝೀರ್(35) ಎಂಬವನಿಗೆ 12 ವರ್ಷ 6 ತಿಂಗಳು ಕಠಿಣ ಸಜೆ ಮತ್ತು 1.10 ಲ.ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ( ಪೋಕ್ಸೊ) ವೆಂಕಟರಮಣ ಸ್ವಾಮಿ ಸಿ. ಅವರು ವಾದಿಸಿದ್ದರು.
ನಝೀರ್ ಜತೆ ಇದ್ದು ಆತನಿಗೆ ಸಹಕರಿಸಿದ್ದ ವಳಚ್ಚಿಲ್ ನ ಶಮೀರ್ ಗೆ ನ್ಯಾಯಾಲಯ 6 ತಿಂಗಳ ಕಠಿಣ ಸಜೆ ಹಾಗೂ ೩೦೦೦೦ ದಂಡ ವಿಧಿಸಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಇನ್ನೋರ್ವ ವಿದ್ಯಾರ್ಥಿ ಮಧ್ಯಾಹ್ನ ಅಡ್ಯಾರ್ ಸಮೀಪ ಗುಡ್ಡದ ಪಕ್ಕ ಬಂಡೆಕಲ್ಲಿನಲ್ಲಿ ಕುಳಿತಿದ್ದಾಗ ಅತ್ಯಾಚಾರ ನಡೆದಿತ್ತು. ಅವರಿಂದ ಹಣ ಸುಲಿಗೆ ಕೂಡ ಮಾಡಲಾಗಿತ್ತು.
ದಂಡದ ಮೊತ್ತ್ದಲ್ಲಿ 1 ಲ.ರೂ. ಹಾಗೂ ಕಾನೂನು ಸೇವಾ ಪ್ರಾಧಿಕಾರವು 2. ಲ.ರೂ ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.