ಮಂಗಳೂರು, ಏ.27 (DaijiworldNews/MB) : ಜನರು ವಿಕೇಂಡ್ ಕರ್ಫ್ಯೂಗೆ ನೀಡಿದ ಸಹಕಾರ ಲಾಕ್ಡೌನ್ ಸಂದರ್ಭದಲ್ಲೂ ನೀಡಲಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ನಾಳೆಯಿಂದ ಮೇ 12 ರ ಬೆಳಿಗ್ಗೆ 6 ರವರೆಗೆ 14 ದಿನಗಳ ಲಾಕ್ಡೌನ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಲಾಕ್ಡೌನ್ ಸಂದರ್ಭ ಸಹಕಾರ ನೀಡುವಂತೆ ಮನವಿ ಮಾಡಿದರು.
ಜನರು ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಹೇಗೆ ಸಹಕರಿಸಿದಿರೋ ಹಾಗೆಯೇ ಮೇ 12 ರವರೆಗೆ ಜನರು ಸಹಕರಿಸಬೇಕೆಂದು ವಿನಂತಿಸಿದರು.
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 54 ಚೆಕ್ಪೋಸ್ಟ್ಗಳು, 3 ಮೊಬೈಲ್ ಸ್ಕ್ವಾಡ್ಗಳು ಇರಲಿದ್ದು, ಸುಮಾರು 1000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಕೂಡಾ ಮಾಹಿತಿ ನೀಡಿದರು.
ಇನ್ನು ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯವಿರುವಾಗ ಜನರಿಗೆ ಸಹಕರಿಸುವಂತೆ ಪೊಲೀಸರುಗೆ ಸಹ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.