ಮಂಗಳೂರು / ಉಡುಪಿ, ಏ.27 (DaijiworldNews/MB) : ನಾಳೆಯಿಂದ ರಾಜ್ಯದಾದ್ಯಂತ ಲಾಕ್ಡೌನ್ ಆಗಲಿದ್ದು ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖರೀದಿ ಭರಾಟೆ ಹೆಚ್ಚಾಗಿದೆ. ವಾಹನ ಸಂಚಾರದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಖರೀದಿಗೆ ಅವಕಾಶ ನೀಡಿದ್ದರೂ, ಮಂಗಳವಾರ ಸರತಿ ಸಾಲಿನಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ.
ಸಾರ್ವಜನಿಕರಿಂದ ನಿರೀಕ್ಷೆಯಂತೆ ರಾಜ್ಯ ಸರ್ಕಾರ 14 ದಿನಗಳ ಲಾಕ್ಡೌನ್ ಘೋಷಿಸಿದೆ. ಆದರೆ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಗೊಂದಲವಿದೆ.
ಮಂಗಳೂರಿನಲ್ಲಿ ಹಲವಾರು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದರೂ ಸಹ, ವಾಹನ ಸಂಚಾರ ಮತ್ತು ಜನದಟ್ಟಣೆ ಗಣನೀಯವಾಗಿ ಹೆಚ್ಚಿದೆ. ತೆರೆದಿರುವ ಅಂಗಡಿಗಳ ಮುಂದೆ ಅಧಿಕ ವಾಹನಗಳು ನಿಂತಿದೆ. ಕೆಲವು ಎಲೆಕ್ಟ್ರಿಕಲ್, ಜವಳಿ ಅಂಗಡಿಗಳು ಮತ್ತು ಸೈಬರ್ ಕೇಂದ್ರಗಳು ಅರ್ಧದಷ್ಟು ಮಾತ್ರ ತೆರೆದಿದೆ.
ಇನ್ನು ಉಡುಪಿಯಲ್ಲಿ ಪೊಲೀಸ್ ಮತ್ತು ಪುರಸಭೆಯ ಅಧಿಕಾರಿಗಳು ಪಾದರಕ್ಷೆ, ಜವಳಿ, ಚಿನ್ನದ ಆಭರಣಗಳು, ಮೊಬೈಲ್ ರೀಚಾರ್ಜ್, ಅಲಂಕಾರಿಕ ವಸ್ತುಗಳ ಅಂಗಡಿ ಮೊದಲಾದವುಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಜನರು ವಿಶೇಷವಾಗಿ ದ್ವಿದಳ ಧಾನ್ಯಗಳು, ಅಕ್ಕಿ, ಹಿಟ್ಟು, ಸಾಬೂನು ಮತ್ತು ದೈನಂದಿನ ಅಗತ್ಯವಿರುವ ಇತರ ವಸ್ತುಗಳನ್ನು ಖರೀದಿಸುವ ಆತುರದಲ್ಲಿದ್ದರು. ಸಗಟು ಕಿರಾಣಿ ಅಂಗಡಿಗಳಲ್ಲೂ ಕೂಡಾ ವ್ಯಾಪಾರ ಚುರುಕಾಗಿತ್ತು.
ಮಂಗಳವಾರ, ಉಡುಪಿಯಲ್ಲಿ ಅನೇಕ ಪ್ರದೇಶಗಳು ಜನರು ದಿನಸಿ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಿದ್ದಂತೆ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದೆ.
ಇನ್ನು ಏತನ್ಮಧ್ಯೆ ಪಾರ್ಸೆಲ್ಗಳನ್ನು ತಲುಪಿಸಲು ಹೋಟೆಲ್ಗಳಿಗೆ ಅನುಮತಿ ಇದೆ ಆದರೆ ಜನರು ಸಂಚಾರ ಮಾಡಲು ಅನುಮತಿ ಇಲ್ಲದಿರುವಾಗ ಹೇಗೆ ಪಾರ್ಸೆಲ್ ಕೊಂಡೊಯ್ಯಲು ಸಾಧ್ಯ ಎಂದು ಹೋಟೆಲ್ ಮಾಲೀಕರು ಆಶ್ಚರ್ಯ ಪಡುತ್ತಾರೆ. ಈ ಕಾರಣದಿಂದಾಗಿ ಹಲವು ಹೊಟೇಲ್ ಉದ್ಯಮಿಗಳು ಹೋಟೆಲ್ಗಳನ್ನು ಮುಚ್ಚಲು ಹಾಗೂ ಸಿಬ್ಬಂದಿಗಳಿಗೆ ರಜೆ ನೀಡಿ ಕಳುಹಿಸಲು ನಿರ್ಧರಿಸಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೆಚ್ಚುವರಿ ಬಸ್ಗಳನ್ನು ಓಡಾಟ ಆರಂಭವಾಗಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಕ ಎಚ್ ಎಸ್ ಅರುಣ್ ಹೇಳಿದ್ದಾರೆ.
ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಮಲ್ಪೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವವರು ಬಸ್ ನಿಲ್ದಾಣದಲ್ಲಿ ಜಮಾಯಿಸಿ ಊರಿಗೆ ತೆರಳುವ ಬಸ್ಗಳಿಗಾಗಿ ಕಾಯುತ್ತಿದ್ದಾರೆ. ಹಾಗೆಯೇ ವೈನ್ ಶಾಪ್ಗಳಲ್ಲಿ ಮದ್ಯಪ್ರಿಯರು ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ.