ಉಡುಪಿ, ಏ.27 (DaijiworldNews/HR): ರಾಜ್ಯ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಜನರನ್ನು ಬಸ್ನಲ್ಲಿ ಹತ್ತಲು ಅವಕಾಶ ಮಾಡಿಕೊಟ್ಟ ಕೆಎಸ್ಆರ್ಟಿಸಿ ಹಿರಿಯ ಮೇಲಧಿಕಾರಿಯ ವಿರುದ್ಧ ಸಿಟಿ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಬಸ್ನ ಚಾಲಕನೊಬ್ಬ ಗರಂ ಆಗಿದ್ದು, ಚಾಲಕ ಮಾಧ್ಯಮದವರ ಎದುರೇ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 28 ರಿಂದ 14 ದಿನಗಳವರೆಗೆ ಲಾಕ್ಡೌನ್ ಘೋಷಿಸಿದಂತೆ ನೂರಾರು ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ತಮ್ಮ ತವರಿಗೆ ಮರಳಿದ್ದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜನರು ಮುಗಿಬಿದ್ದಿದ್ದರು.
ಇನ್ನು ಹುಬ್ಬಳ್ಳಿ, ಬೆಂಗಳೂರು, ಮೈಸೂರಿಗೆ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್ ಸೇವೆ ನೀಡಲಾಗಿದ್ದು, ಖಾಸಗಿಯಿಂದಲೂ ಉಡುಪಿ ಬೆಂಗಳೂರಿಗೆ ವಿಶೇಷ "ಡೇ ಸರ್ವಿಸ್" ಬಸ್ ಸಂಚರಿಸುತ್ತಿದೆ.
ಬೆಂಗಳೂರಿಗೆ ಹೋಗುವ ಕೆಎಸ್ಆರ್ಟಿಸಿ ಬಸ್ನಲ್ಲಿ ವಿರಳ ಜನ ಕಂಡುಬಂದಿದ್ದು, ವೋಲ್ವೋ, ಅಂಬಾರಿ,ಮತ್ತು ಸುವರ್ಣ ಕರ್ನಾಟಕ ಸಾರಿಗೆಯ ಹೆಚ್ಚುವರಿ ಬಸ್ ಸಂಚರಿಸಿದೆ.