ಮಂಗಳೂರು, ಏ 26(DaijiworldNews/MS): ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದ ಕಾರಣ ಮೀನುಗಾರಿಕೆ ನಡೆಸಿ ಮಂಗಳೂರು ಬಂದರಿಗೆ ಹಿಂತಿರುಗಿದ ಮೀನುಗಾರರು ಮೀನು ಅನ್ ಲೋಡ್ ಮಾಡಲಾಗದೆ ಬೋಟಿನಲ್ಲಿ ಉಳಿದುಕೊಳ್ಳಬೇಕಾಯಿತು.
ಹತ್ತು ದಿನಗಳ ಮೊದಲೇ ಮೀನುಗಾರಿಕೆಗೆ ಮಂಗಳೂರಿಂದ ತೆರಳಿದ ಬೋಟುಗಳು ಶನಿವಾರ ಭಾನುವಾರ ಹಿಂತಿರುಗಿ ಬಂದಿದೆ. ಆದರೆ ಅಷ್ಟರಲ್ಲಿ ವಿಕೇಂಡ್ ಕರ್ಪ್ಯೂ ಜಾರಿಯಾಗಿತ್ತು. ಇನ್ನೊಂದೆಡೆ ಮೀನು ಇಳಿಸಲು ಕಾರ್ಮಿಕರು ಬಂದರಿನಲ್ಲಿ ಇರಲಿಲ್ಲ ಆದ್ದರಿಂದ 60ಕ್ಕೂ ಹೆಚ್ಚು ಬೋಟುಗಳಲ್ಲಿ ಮೀನು ಸಹಿತ ಮೀನುಗಾರರು ಬಂದರಿನಲ್ಲಿ ಉಳಿಯಬೇಕಾಯಿತು.
ವಾಹನ ಸಂಚಾರಕ್ಕೆ ಅವಕಾಶ ಇಲ್ಲದಿದ್ದರಿಂದ ಮತ್ತು ಅಂಗಡಿಗಳು ತೆರೆಯದ ಕಾರಣ ಮೀನುಗಾರರ ಬೋಟ್ ಗಳಲ್ಲಿಯೇ ಉಳಿದರು. ಊಟ ತಿಂಡಿಗೆ ವ್ಯವಸ್ಥೆ ಇರುವುದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ವಾರಂತ್ಯ ಕರ್ಪ್ಯೂ ಹೊರತುಪಡಿಸಿ ಇತರ ದಿನಗಳಲ್ಲಿ ಬಂದರಿಗೆ ಬರುವಂತೆ ಸಮಯ ಹೊಂದಿಸಿಕೊಳ್ಳಬೇಕು ಎಂದು ಮೀನುಗಾರರ ಮುಖಂಡರುಗಳ ಮಾಲಕರಿಗೆ ಸೂಚಿಸಿದ್ದಾರೆ.