ಮೂಡುಬಿದ್ರೆ, ಏ.25 (DaijiworldNews/HR): ಕಲ್ಲಮುಂಡ್ಕೂರು ಪಿದ್ಮಲೆಯ ಗುಡ್ಡಗಾಡು ಪ್ರದೇಶದ ಸುಮಾರು ಐದು ಎಕರೆ ಜಾಗದಲ್ಲಿ ರವಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿ ಶಾಮಕ ದಳದ ನೀರಿನ ಟ್ಯಾಂಕರ್ಗಳ ಗಾಲಿಗಳು ಸವೆದು ಹೋಗಿ ಹರಿದುಕೊಂಡಿರುವ ಕಾರಣ ಬೆಂಕಿ ಇರುವಲ್ಲಿಗೆ ವಾಹನ ಹೋಗಲಾಗುತ್ತಿಲ್ಲ ಎನ್ನಲಾಗಿದೆ.
ಇದು ಮೀಸಲು ಅರಣ್ಯವಾಗಿರುವುದರಿಂದ ಕಲ್ಲಮುಂಡ್ಕೂರು ಮತ್ತು ತೆಂಕಮಿಜಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಯಲ್ಲಿ ಹರಡಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ಮಾಹಿತಿ ಅರಣ್ಯ ಇಲಾಖೆಗೂ ಲಭಿಸಿದ್ದು ಡಿಆರ್ಎಫ್ಓ ಸಹಿತ ಸಿಬಂದಿ ಗಳು ಅಗ್ನಿ ಶಾಮಕರು, ಊರವರು ಬೆಂಕಿ ನಂದಿಸಿದ್ದಾರೆ.