ಬೆಳ್ತಂಗಡಿ, ಎ.25 (DaijiworldNews/PY): ತಾಲೂಕಿನ ಲಾಯಿಲ ಬಳಿ ಇತ್ತೀಚೆಗೆ ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾರೆ.
ಲಾಯಿಲದ ಪುತ್ರಬೈಲು ಸಮೀಪ ರಿಕ್ಷಾ ಚಾಲಕ ಪ್ರಮೋದ್ ಭೈರ ಅವರು ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು.
ಶನಿವಾರ ರಾತ್ರಿ ಪ್ರಮೋದ್ ಅವರಿಗೆ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಆಪರೇಶನ್ ನಡೆದಿತ್ತು. ಆದರೆ, ಇಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಎಪ್ರಿಲ್ 10ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಾಲ್ವರು ಗಾಯಗೊಂಡಿದ್ದರು.
ಅಪಘಾತದ ಸಂದರ್ಭ ರಿಕ್ಷಾದಲ್ಲಿದ್ದ ಇತರರಾದ ರಾಮಣ್ಣ ಪುತ್ರಬೈಲು, ವಸಂತ ರಾಣಿ, ರಾಮಪ್ಪ ಗಾಂಧೀನಗರ ಎನ್ನುವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ.