ಕುಂದಾಪುರ, ಏ.24 (DaijiworldNews/HR): ನೇರಳಕಟ್ಟೆ ಪೇಟೆಯ ಸುರೇಶ ಪೂಜಾರಿ ಎನ್ನುವವರಿಗೆ ಸೇರಿದ ಹಣ್ಣಿನ ಅಂಗಡಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾದ ಘಟನೆ ಶನಿವಾರ ನಡೆದಿದೆ.
ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು ಇದ್ದಕ್ಕಿದ್ದಂತೆ ಬೆಂಕಿ ತೀವ್ರಗೊಂಡಿದ್ದು, ಅಂಗಡಿಯೊಳಗೆ ಗ್ಯಾಸ್ ಸಿಲೆಂಡರ್ ಇದ್ದು ಅದು ಸಿಡಿದಿದೆ ಎನ್ನಲಾಗಿದೆ.
ಇನ್ನು ಅಗ್ನಿಶಾಮಕದಳವರು ಬರುವುದರೊಳಗೆ ಭಾಗಶಃ ಅಂಗಡಿ ಬೆಂಕಿಗೆ ಆಹುತಿಯಾಗಿದ್ದು, ಅಂದಾಜು ಸುಮಾರು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.