ಕುಂದಾಪುರ, ಎ.24 (DaijiworldNews/PY): ಕೊರೊನಾ ನಿಯಂತ್ರಣಕ್ಕೆ ವಾರಂತ್ಯದ ಲಾಕ್ಡೌನ್ಗೆ ಶನಿವಾರ ಕುಂದಾಪುರದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ. ಬೆಳಗ್ಗೆ 10 ಗಂಟೆಯಿಂದ ಸಂಪೂರ್ಣ ಬಂದ್ ಆಗಿದ್ದು, ಬೆರಳೆಣಿಕೆಯಲ್ಲಿ ವಾಹನ ಸಂಚಾರ ಕಂಡು ಬಂದಿದೆ.
ಪ್ರಾರಂಭದ ದಿನ ಆದ್ದರಿಂದ ಆರೋಗ್ಯ ಸಂಬಂಧಿ, ಔಷಧಿ ಮತ್ತಿತರ ತೀರ ಅಗತ್ಯತೆಗಾಗಿ ರಸ್ತೆಗಿಳಿದ ವಾಹನ ಸವಾರರ ವಾಹನ ಸಂಖ್ಯೆ, ಮೊಬೈಲ್ ಸಂಖ್ಯೆ ದಾಖಲಿಸಿಕೊಂಡ ಪೊಲೀಸರು ತಿಳಿ ಹೇಳಿ ಕಳುಹಿಸುತ್ತಿರುವುದು ಕಂಡು ಬಂತು. ನಿಯಮಬಾಹಿರವಾಗಿ ಸಂಚರಿಸುತ್ತಿದ್ದ ಕೆಲವೊಂದು ಟಿಪ್ಪರ್ಗಳಿಗೆ ದಂಡ ವಿಧಿಸಲಾಯಿತು.
ಕುಂದಾಪುರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿಯದಂತೆ ಮನವಿ ಮಾಡುತ್ತಿದ್ದಾರೆ. ಸಹಾಯಕ ಆಯುಕ್ತ ಕೆ.ರಾಜು ಪರಿಶೀಲನೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಶ್ರೀಕಾಂತ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ, ಎಸ್.ಐ ಸದಾಶಿವ ಗವರೋಜಿ ನೇತೃತ್ವದಲ್ಲಿ ಆರಕ್ಷಕ ಸಿಬ್ಬಂದಿಗಳು ವಾರಂತ್ಯದ ಲಾಕ್ಡೌನ್ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಕುಂದಾಪುರ ಪುರಸಭೆಯ ವತಿಯಿಂದ ರಸ್ತೆ, ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮಂಭಾಗಕ್ಕೆ ಸ್ಯಾನಿಟೈಸ್ ಮಾಡಲಾಯಿತು.