ಕಾರ್ಕಳ, ಏ 24 (DaijiworldNews/MS): ಕಾರ್ಕಳ ತಾಲೂಕಿನ ಕೌಡೂರು ಶ್ರೀರಾಮ ಮಂದಿರಕ್ಕೆ ನುಗ್ಗಿದ್ದ ಕಳವು ಬೆಳ್ಳಿಯ ಅಭರಣ ಹಾಗೂ ನಗದು ಕಳವು ಗೈದಿರುವ ಘಟನೆ ಏ. 23ರಂದು ನಡೆದಿದೆ.
ಮಂದಿರ ಪೂರ್ವ ಭಾಗದ ಕಬ್ಬಿಣದ ಶಟರ್ ಮುರಿದು ಒಳ ಪ್ರವೇಶಿಸಿ ಕಳ್ಳರು ಗರ್ಭ ಗುಡಿಯ ಬಾಗಿಲನ್ನು ಮುರಿದು ದೇವರ ಫೋಟೋಕ್ಕೆ ಹಾಕಿದ್ದ ರೂ.75 ಸಾವಿರ ಮೌಲ್ಯದ ಬೆಳ್ಳಿಯ ಹೂವಿನ ಅಭರಣ ಹಾಗೂ ಹಣವಿದ್ದ ಕಾಣಿಕೆ ಡಬ್ಬಿ, ಅಲ್ಲದೇ ಕಚೇರಿಯ ಡ್ರಾವರನ್ನು ಮುರಿದು ಅದರಲ್ಲಿ ಇದ್ದ ರೂ.೩ ಸಾವಿರ ನಗದು ಕಳವು ಗೈದಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ