ಉಡುಪಿ, ಏ.23 (DaijiworldNews/HR): ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ವಾದಿಸುವ ವಕೀಲರೇ ಕಾನೂನು ಉಲ್ಲಂಘಿಸಿ ಇಂದು ಉಡುಪಿ ಕೋರ್ಟ್ ಆವರಣದಲ್ಲಿ ನೂರಾರು ಮಂದಿಗೆ ಬೋಜನ ವ್ಯವಸ್ಥೆ ಮಾಡಿದ ಘಟನೆ ನಡೆದಿದೆ.
ಈ ವಿಷಯವನ್ನು ನಗರ ಪುರಸಭೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೂ ಅವರು ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ.
ಇನ್ನು ಕೊರೊನಾ ನಿಯಮಗಳು ವಕೀಲರಿಗೆ ಅನ್ವಯವಾಗುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಉಡುಪಿಯಲ್ಲಿ ಸಂದಿಗ್ಧ ಪರಿಸ್ಥಿತಿ ಇರುವಾಗ ಜನ ಒಗ್ಗೂಡಿಸುವ ಔತಣಕೂಟದ ವ್ಯವಸ್ಥೆ ಮಾಡಿ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.