ಮಂಗಳೂರು, ಏ 23 (DaijiworldNews/MS): ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಅವರ ತಂಡವು ಏ.23 ರ ಶುಕ್ರವಾರ ನಗರದ ಹಂಪನಕಟ್ಟೆ, ಮಿಲಾಗ್ರಿಸ್ , ಸೆಂಟ್ರಲ್ ಮಾರುಕಟ್ಟೆ ಸೇರಿ ವಿವಿಧೆಡೆ ದಾಳಿ ನಡೆಸಿದ್ದು, ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಉಲ್ಲಂಘಿಸಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಅಗತ್ಯ ಆಹಾರ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಅಂಗಡಿ - ಮಳಿಗೆಗಳನ್ನು ಮುಚ್ಚಲು ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ನಗರ ಸೆಂಟ್ರಲ್ ಮಾರುಕಟ್ಟೆ ಹಾಗೂ ಇತರೆಡೆ ದಾಳಿ ನಡೆಸಿ ಅಂಗಡಿಗಳನ್ನು ಮುಚ್ಚಲು ಆದೇಶಿದ್ದರು. ಈ ಆದೇಶದ ಹೊರತಾಗಿಯೂ ಕೆಲವರು ಮತ್ತೆ ಶುಕ್ರವಾರ ಆಭರಣಗಳು, ಬಟ್ಟೆ ಮಳಿಗೆಗಳಂತಹ ಅಂಗಡಿಗಳನ್ನು ತೆರೆದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಉಲ್ಲಂಘಿಸಿದ , ಜುವೆಲ್ಯರಿ ಮಳಿಗೆ, ವಸ್ತ್ರ ಮಳಿಗೆ, ಪುಟ್ ವೇರ್ ಶಾಪ್ ಮುಂದಾದ ಅಂಗಡಿಗಳ ವಿರುದ್ದ ಪ್ರಕರಣ ದಾಖಲಿಸಿದರು.
ಇದೇ ವೇಳೆ ಪೊಲೀಸರ ತಂಡವು ಕೋವಿಡ್ಗೆ ಹಿರಿಯ ನಾಗರಿಕರಿಗೆ ಗುಲಾಬಿ ಹೂವುಗಳನ್ನು ಹಸ್ತಾಂತರಿಸಿ ಕೊವೀಡ್ ಕುರಿತು ಜಾಗೃತಿ ಮೂಡಿಸಿದರು.