ಬೆಂಗಳೂರು, ಏ. 22(DaijiworldNews/HR): "ರಾಜ್ಯ ಸರ್ಕಾರ ದಿನಕ್ಕೊಂದು ಮಾರ್ಗಸೂಚಿ ಜಾರಿ ಮಾಡಿ ಜನರನ್ನು ಗೊಂದಲ ಮತ್ತು ಭಯದ ವಾತಾವರಣದಲ್ಲಿಟ್ಟು ತಮಾಷೆ ನೋಡುತ್ತಿದೆ" ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಲಾಕ್ಡೌನ್ ಇಲ್ಲ ಎಂದ ಸರ್ಕಾರ ಈಗ ಅಗತ್ಯ ವಸ್ತು ಹೊರತು ಪಡಿಸಿ ಎಲ್ಲವನ್ನ ಬಂದ್ ಮಾಡಬೇಕು ಎಂಬ ಆದೇಶ ಹಿಂಬಾಗಿಲಿನಿಂದ ಲಾಕ್ಡೌನ್ ಹೇರಿದಂತಾಗಿದೆ" ಎಂದರು.
ಇನ್ನು "ಈ ರೀತಿಯಾಗಿ ನಿಮಿಷಕ್ಕೊಂದು ನಿರ್ಧಾರ ತೆಗೆದುಕೊಳ್ಳುವ ಸರ್ಕಾರ ತುಘಲಕ್ ದರ್ಬಾರ್ ನಡೆಸದೇ ನೇರಾ ನೇರ ಆದೇಶ ಮಾಡಿ. ಲಾಕ್ ಡೌನ್ ಬಗ್ಗೆ ಸ್ಪಷ್ಟನೆ ಕೊಡಿ" ಎಂದು ಹೇಳಿದ್ದಾರೆ.