ಮಂಗಳೂರು, ಏ 22 (DaijiworldNews/MS): ನಿಂತಿದ್ದ ತ್ಯಾಜ್ಯ ವಿಲೇವಾರಿ ವಾಹನವೊಂದು ಹಠಾತ್ ಚಲಿಸಿದ ಪರಿಣಾಮ ಎದುರಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು ಮುಂದೆ ಸಾಗಿ ಕೋಳಿ ಅಂಗಡಿ ಢಿಕ್ಕಿಯಾದ ಘಟನೆ ಏ.22ರ ಗುರುವಾರ ಬೆಳಗ್ಗೆ ನಗರದ ಕಂಕನಾಡಿ ಮಾರುಕಟ್ಟೆಯ ಬಳಿ ನಡೆದಿದೆ.
ಆಂಟ್ಯನಿ ಕಂಪೆನಿಗೆ ಸೇರಿದ ಈ ತ್ಯಾಜ್ಯ ವಿಲೇವಾರಿ ಲಾರಿಯನ್ನು ಚಾಲಕ ನಿಲ್ಲಿಸಿ ಸ್ವಲ್ಪ ದೂರ ತೆರಳಿದ್ದ. ಇದೇ ವೇಳೆ ಲಾರಿಯು ಏಕಾಏಕಿ ಚಲಿಸಿ ಮೂರು ಕಾರು, ಎರಡು ದ್ವಿಚಕ್ರ ವಾಹನ, ಒಂದು ಟೆಂಪೋಗೆ ಢಿಕ್ಕಿ ಹೊಡೆದಿದೆ. ಈ ಪೈಕಿ ಒಂದು ದ್ವಿಚಕ್ರ ವಾಹನ ಸಂಪೂರ್ಣನಜ್ಜುಗುಜ್ಜಾಗಿದೆ. ಮುಂದೆ ಸಾಗಿದ ಲಾರಿ ಕೋಳಿ ಮಾರಾಟದ ಅಂಗಡಿಗೂ ನುಗ್ಗಿದ್ದು, ಅಂಗಡಿಯ ಜನರೇಟರ್ ಗೆ ಹಾನಿಯಾಗಿದೆ.
ಲಾರಿ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.