ಉಪ್ಪಿನಂಗಡಿ, ಏ 22 (DaijiworldNews/MS): ಕಂಟೇನರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಏ.22ರ ಮುಂಜಾನೆ 2 ಗಂಟೆ ವೇಳೆಗೆ ನಡೆದಿದೆ.
ಮೃತ ಚಾಲಕನನ್ನು ನುಸ್ರಲ್ಲಾಖಾನ್ (31) ಎಂದು ಗುರುತಿಸಲಾಗಿದೆ. ಈತ ಜಾರ್ಖಂಡ್ ಮೂಲದದವನಾಗಿದ್ದಾನೆ.
ಕಂಟೇನರ್ ಲಾರಿಯೂ ಶಿರಾಡಿ ಕೊಡ್ಡೆಕಲ್ ಎಂಬಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಚಾಲಕ ಸಾವನ್ನಪ್ಪಿದ್ದಾನೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.