ಕಾಸರಗೋಡು, ಏ.21 (DaijiworldNews/MB): ಕಾರುಗಳ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉದ್ಯಾವರ ನಿವಾಸಿಯೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉದ್ಯಾವರ ಬಿ. ಜೆ.ಎಂ ಕ್ರಾಸ್ ರಸ್ತೆಯ ಬಿ. ಕೆ ಮುಹಮ್ಮದ್ ರಫೀಕ್ (48) ಮೃತಪಟ್ಟವರು.
ಜೊತೆಗಿದ್ದ ಪತ್ನಿ ಮಿಸಿರಿಯಾ (39), ಸಂಬಂಧಿಕ ಅಶ್ರಫ್ (42) ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ರಾತ್ರಿ ಬಂದ್ಯೋಡಿನಲ್ಲಿ ಅಪಘಾತ ನಡೆದಿತ್ತು. ರಫೀಕ್ ಮತ್ತು ಕುಟುಂಬದವರು ಕುಂಬಳೆಯಿಂದ ಮಂಜೇಶ್ವರಕ್ಕೆ ಮರಳುತ್ತಿದ್ದಾಗ ಮಂಗಳೂರು ಕಡೆಯಿಂದ ಕಾಸರಗೋಡಿಗೆ ತೆರಳುತ್ತಿದ್ದ ಕಾರು ನಡುವೆ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ರಫೀಕ್ ಗುರುವಾರ ಬೆಳಿಗ್ಗೆ ಮೃತಪಟ್ಟರು.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.