ಉಡುಪಿ, ಏ 20(DaijiworldNews/MS): ವಿಶ್ವವೇ ಗೌರವಿಸುವ ಭಾರತ ರತ್ನ ಡಾ. ಬಾಬಾ ಸಾಹೇಬ್ರನ್ನು ಅಗೌರವದಿಂದ ಕಾಣಬೇಕೆನ್ನುವ ಉದ್ದೇಶದಿಂದ ಬ್ರಹ್ಮಾವರ ಬಿಇಒ ಓ.ಆರ್ ಪ್ರಕಾಶ್ ರವರು ಬ್ರಹ್ಮಾವರ ಕನ್ನಡ ಭಾಷಾ ಶಿಕ್ಷಕರ ವಾಟ್ಸಾಪ್ ಗ್ರೂಪ್ನಲ್ಲಿ "ಪ್ರೌಡ್ ಟು ಬ್ರಾಹ್ಮಿನ್" ಎಂಬ ತಲೆಬರಹದ ಅಡಿಯಲ್ಲಿ ಮೇಸೆಜ್ ಅನ್ನು ಕಳುಹಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಗೌವರವ ಪೂರ್ವಕವಾಗಿ ಬರೆದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.
" ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಓ.ಆರ್. ಪ್ರಕಾಶ್ರವರು “Proud to be Brahmin” ಎಂಬ ತಲೆಬರಹದ ಅಡಿಯಲ್ಲಿ ಬಾಬಾ ಸಾಹೇಬರು ಒಬ್ಬರೇ ಸಂವಿಧಾನವನ್ನು ಬರೆದಿಲ್ಲ. ಬೆನಗಲ್ ನರಸಿಂಗ ರಾವ್ರವರು ಸಂವಿಧಾನವನ್ನು ಬರೆದಿದ್ದು, ಎಂಬಿತ್ಯಾದಿ ವಿಷಯಗಳನ್ನು ಲಿಖಿತ ರೂಪದಲ್ಲಿ ಚರ್ಚಿಸುತ್ತಾ, ಬ್ರಾಹ್ಮಣರೇ ಶ್ರೇಷ್ಠರು ಎಂದು ಪ್ರತಿಪಾದಿಸಲು ಹೊರಟು ಡಾ. ಬಾಬಾ ಸಾಹೇಬರವರಿಗೆ ಅಗೌರವವನ್ನು ತೋರಿಸಿದ್ದು , ಪ್ರಕಾಶ್ ಅವರು
ಸರಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದು, ನೌಕರರಾಗಿದ್ದು, ಸಂವಿಧಾನಬದ್ಧ ಎಲ್ಲಾ ಸಂವಿಧಾನ ಪಿತಾಮಹರಾಗಿರುವ ಸಾಹೇಬರನ್ನು ಅಗೌರವದಿಂದ, ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕೆಂಬ ದುರುದ್ದೇಶದಿಂದ ಮಾಡಿರುವ ಕೃತ್ಯವಾಗಿದೆ.
ಈ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1)(ಯು), 3(1)(ವಿ) ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕೆಂದು ಸುಂದರ್ ಮಾಸ್ತರ್ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.