ಮಂಗಳೂರು / ಉಡುಪಿ, ಏ.19 (DaijiworldNews/MB) : ಏಪ್ರಿಲ್ 18 ರ ಭಾನುವಾರದಂದು ಮುಂಗಾರಿಗೂ ಮುನ್ನ ಉಡುಪಿ, ದಕ್ಷಿಣ ಕನ್ನಡ ಉಭಯ ಜಿಲ್ಲೆಗಳ ಅನೇಕ ಭಾಗಗಳಲ್ಲಿ ಮಳೆ ಸುರಿದಿದೆ.
ಬೆಳ್ತಂಗಡಿ, ಧರ್ಮಸ್ಥಳ, ಬಾಲಂಜ, ಮುಂಡಾಜೆ, ಗೇರುಕಟ್ಟೆ, ವಿಟ್ಲ, ಮಂಚಿ, ಸಾಲೆತ್ತೂರು, ಬಂಟ್ವಾಳ, ಕಲ್ಲಡ್ಕ, ಬಿಸಿ ರೋಡ್, ಪುತ್ತೂರು, ಕೆಯ್ಯೂರು, ಕೇದಂಬಾಡಿ, ಪನಾಜೆ, ಉಬರಡ್ಕ, ಬೆಳ್ತಂಗಡಿಯಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಮಳೆ ಸುರಿದಿದೆ. ಕಡಬ ಹಾಗೂ ಅಲಂಗಾರಿನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗಿದೆ. ತೀವ್ರ ಗಾಳಿಯಿಂದಾಗಿ ಗುತ್ತಿಗಾರು ಯುವಕ ಮಂಡಲದ ಮೇಲ್ಛಾವಣಿ ಹಾರಿ ಹೋಗಿದೆ.
ಉಪ್ಪಿನಂಗಡಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗಿದೆ. ಅತಿ ವೇಗದ ಗಾಳಿಯಿಂದಾಗಿ 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಧರಶಾಹಿಯಾಗಿದೆ. ಒಂದು ದೊಡ್ಡ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಪರಿಣಾಮ ಉಪ್ಪಿನಂಗಡಿ-ಅಂಡೆತ್ತಡ್ಕ ರಸ್ತೆಯಲ್ಲಿ ಕೊಂಚ ಸಮಯದವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉಪ್ಪಿನಂಗಡಿ, ಇಳಂತಿಲ ಹಾಗೂ ರಾಮಕುಂಜದಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿತು.
ಶಿರ್ತಾಡಿ ಹಾಗೂ ಹೊಸಮಾರು ಸೇರಿ ಮೂಡುಬಿದಿರೆಯಲ್ಲಿ ಭಾನುವಾರ ರಾತ್ರಿ ಅರ್ಧ ಗಂಟೆಗಳ ಕಾಲ ತೀವ್ರ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಭಾನುವಾರ ಸಂಜೆ ಭಾರೀ ಮಳೆಯಾಗಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಂಚ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಮಿಂಚು ಮತ್ತು ಗುಡುಗು ಅಧಿಕವಾಗಿತ್ತು.
ಕೋಟಾ, ಕಟಪಾಡಿ, ಬ್ರಹ್ಮಾವರ ಹಾಗೂ ಮಣಿಪಾಲದಲ್ಲಿ ಸಹ ಕೊಂಚ ಮಳೆಯಾಗಿದೆ. ಶಿರೂರು, ಬೈಂದೂರು, ಕೊಲ್ಲೂರು, ಸಿದ್ದಾಪುರ, ಹೊಸಂಗಡಿ, ಎಡಮೊಗೆ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಲಿಯಂಗಡಿ, ಬೆಳ್ವೆ, ಮಾಡಮಕ್ಕಿ, ಹೆಂಗಾವಳ್ಳಿ, ಉಲ್ಲೂರು, ಕುಂದಾಪುರ, ಬಸ್ರೂರು ಹಾಗೂ ತೆಕ್ಕಟ್ಟೆಯಲ್ಲಿ ಭಾರೀ ಮಳೆಯಾಗಿದೆ. ಕಾರ್ಕಳ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದೆ.