ಮಂಗಳೂರು, ಏ. 17 (DaijiworldNews/HR): ಕೊರೊನಾವನ್ನು ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಹೊಂದಿರುವ 'ಮಾದರಿ' ಕೊರೊನಾ ಕೇಂದ್ರವಾಗಿ ಮಾರ್ಪಟ್ಟಿರುವ ಉರ್ವಾ ಪೊಲೀಸ್ ಠಾಣೆಗೆ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಶನಿವಾರ ಭೇಟಿ ನೀಡಿದ್ದಾರೆ.
ಪೊಲೀಸ್ ಠಾಣೆಯ ಆವರಣದಲ್ಲಿ ಕೊರೊನಾ ಪರೀಕ್ಷಾ ಕೇಂದ್ರಗಳಿದ್ದು, ಅಲ್ಲಿ ಠಾಣೆಗೆ ಭೇಟಿ ನೀಡುವವರ ವಿವರಗಳನ್ನು ಸಂಗ್ರಹಿಸುತ್ತಾರೆ. ಆಕ್ಸಿಮೀಟರ್ ಅನ್ನು ಬಳಸಲಾಗುತ್ತದೆ ಮತ್ತು ಥರ್ಮಲ್ ಚೆಕ್-ಅಪ್ ಮಾಡಲಾಗಿ ಬಳಿಕ ಠಾಣೆಯ ಒಳಗೆ ಹೋಗಲು ಅನುಮತಿಸಲಾಗುತ್ತದೆ.
ಬಳಿಕ ಠಾಣೆಗೆ ಆಗಮಿಸಿದ ಸಿಬ್ಬಂದಿಗಳಿಗೆ ಕಷಾಯ ಮತ್ತು ಕುಡಿಯಲು ಬಿಸಿನೀರನ್ನು ಕೂಡ ನೀಡಲಾಗುವುದು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿ ಕುಮಾರ್ "ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಹಲವಾರು ಪೊಲೀಸರಿಗೆ ಕೊರೊನಾ ದೃಢಪಟ್ಟಿದ್ದು, ಪೊಲೀಸರ ಸುರಕ್ಷತೆಗಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಪೊಲೀಸರಿಗೆ ಆಯುರ್ವೇದ ಕಷಾಯವನ್ನು ಸಹ ದಿನಕ್ಕೆ ಮೂರು ಬಾರಿ ನೀಡಲಾಗುವುದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅವರಿಗೆ ಹೆಚ್ಚುವರಿಯಾಗಿ ಕುಡಿಯಲು ಬಿಸಿನೀರನ್ನು ನೀಡಲಾಗುವುದು" ಎಂದರು.
ಇನ್ನು ನಾವು ಎಲ್ಲಾ ಪೊಲೀಸ್ ಠಾಣೆಯ ಆವರಣದಲ್ಲಿ ಇಂತಹ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.