ಉಡುಪಿ, ಏ.16 (DaijiworldNews/HR): 250 ಕೋಟಿ ಅಂದಾಜು ವೆಚ್ಚದ ಒಳಚರಂಡಿ ಅಭಿವೃದ್ದಿ ಯೋಜನೆಗೆ ಡಿಪಿ ಆರ್ ಸಿದ್ದವಾಗಿದ್ದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ತಾಂತ್ರಿಕವಾಗಿ ಅನುಮೋದನೆ ಸಿಕ್ಕಿದರೆ ಅದು ಸರಕಾರದ ಅನುಮೋದನೆಗೆ ಹೋಗುತ್ತದೆ. ಈಗಾಗಲೇ ಕರ್ನಾಟಕ ಬಜೆಟ್ ನಲ್ಲಿ ಒಳಚರಂಡಿ ಅಭಿವೃದ್ಧಿಗಾಗಿ ರೂ 5,000 ಕೋಟಿ ಘೋಷಣೆ ಮಾಡಲಾಗಿದ್ದು, ಇನ್ನು 25 ಲಕ್ಷ ಮೊತ್ತವನ್ನು ಡಿಪಿಆರ್ ಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಕೊಡಲಾಗಿತ್ತು. ಇನ್ನು ಮಣಿಪಾಲ್ ಮತ್ತು ಸಂತೆಕಟ್ಟೆ ಬಾಗದ ಯುಜಿಡಿಗಾಗಿ ರೂ 450 ಕೋಟಿ ವೆಚ್ಚದ ಡಿಪಿಆರ್ ಯೋಜನೆ ಸಿದ್ದವಾಗಿ ತಾಂತ್ರಿಕ ಅನುಮೋದನೆಗೆ ಕಳುಹಿಸಲಾಗಿದೆ. ಒಮ್ಮೆ ನಗರ ಭಾಗದ ಒಳಚರಂಡಿ ಆದ ಮೇಲೆ ಉಳಿದ ಭಾಗದ ಚರಂಡಿಯ ಕಾಮಗಾರಿ ಅರಂಭವಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ನಗರಸಭೆಯ ಸಭಾಂಗಣದಲ್ಲಿ ನಡೆದ ಉಡುಪಿ ನಗರ ಭಾಗದಲ್ಲಿ ತುರ್ತಾಗಿ ಆಗಬೇಕಿದ್ದ ಯುಜಿಡಿ ಯೋಜನೆಯನ್ನು ಕುರಿತಾದ ಸಭೆಯಲ್ಲಿ ಮಾತನಾಡಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಇಂದು ಮಂಡಳಿಯ ಅಧಿಕಾರಿಗಳು ಯೋಜನೆಯನ್ನು ವಿವರಿಸಿದರು.
ಯುಜಿಡಿ ವ್ಯವಸ್ಥೆ ಪೂರ್ಣವಾದರೆ ಇಂದ್ರಾಣಿ ಸಂಪೂರ್ಣವಾಗಿ ಶುದ್ಧಗೊಳ್ಳಲಿದ್ದಾರೆ ಎಂದು ಶಾಸಕರು ಭರವಸೆ ನೀಡಿದರು.
ನಗರದಲ್ಲಿ 11 ಸೆಪ್ಟಿಕ್ ಟ್ಯಾಂಕ್ಗಳಿದ್ದು, ಈಗ ಇರುವ ಸಿವೇಜ್ ತ್ರೀಟ್ ಮೆಂಟ್ ನ ಸಾಮಾರ್ಥ್ಯ 12 ಎಮ್ ಎಲ್ ಡಿ ಇದ್ದು ಒಟ್ಟು ಹಳೆಯ 100 ಕಿಮಿ ಉದ್ದದ ಯುಜಿಡಿ ಪೈಪ್ ಸೇರಿದಂತೆ 150 ಕಿಮೀ ಉದ್ದದ ಪೈಪ್ ಲೈನ್ ಅಳವಡಿಸಲಾಗುತ್ತದೆ ಎಂದರು.
ನಗರಸಭೆ ಎಂಜಿನಿಯರ್ ಮೋಹನ್ ರಾಜ್ ಮಾತನಾಡಿ, "ಸರಕಾರಿ ಜಾಗ ಇರುವಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ಯಾವುದೇ ತೊಂದರೆ ಇಲ್ಲ. ಆದರೆ ಖಾಸಗಿ ಜಾಗದಲ್ಲಿ ತೊಂದರೆ ಆಗುವ ಸಾದ್ಯತೆ ಇರುವುದರಿಂದ ಸಾದ್ಯವಾದಷ್ಟು ಸೆಪ್ಟಿಕ್ ಟ್ಯಾಂಕ್ಗಳನ್ನು ಕಡಿಮೆ ಹಾಗೂ ನಗರದಲ್ಲಿ ವರ್ಟಿಕಲ್ ಆಧಾರಿತ ಸರ್ವೇ ನಡೆಸಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಠದಬೆಟ್ಟು, ಕಿನ್ನಿಮೂಲ್ಕಿ, ಕಪ್ಪೆಟ್ಟು ವೆಟ್ವೆಲ್ ಪ್ರದೇಶದಲ್ಲಿ ವೆಟ್ವೆಲ್ ಮೇಲ್ದರ್ಜೆಗೇರಿಸಲಾಗುತ್ತದೆ. ಕರಾವಳಿ ಸಮೀಪದ ಶಾರದ ವೆಟ್ವೆಲ್ನ್ನು ಒತ್ತಡ ಹೆಚ್ಚಿರುವ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಕಾಂಚನಾ ಹುಂಡೈ ಸಮೀಪದ ಸೇತುವೆ ಬಳಿ ಹಾಗೂ ಮಲ್ಪೆ ರಸ್ತೆಯ ಸಮೀಪದಲ್ಲಿ ಹೊಸದಾಗಿ ಎರಡು ವೆಟ್ವೆಲ್ ನಿರ್ಮಿಸಲಾಗುತ್ತದೆ ಎಂದು ವಾಟರ್ ಬೋರ್ಢ್ನ ಎಕ್ಸೆಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್ ಮಾಹಿತಿ ನೀಡಿದರು.
ಎಮ್ ಡಿ ರವಿ, ಅಸಿಸ್ಟೆಂಟ್ ಇಂಜಿನಿಯರ್ , ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಪೌರಾಯುಕ್ತ ಉದಯ ಶೆಟ್ಟಿ, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.