ಸುರತ್ಕಲ್, ಎ.16 (DaijiworldNews/PY): ಪಿ.ಕೆ.ದೂಜ ಪೂಜಾರಿಯವರ ಟೆಕ್ಸ್ಟೈಲ್ ಶೋರೂಂನ 15ನೇ ಮಳಿಗೆ ಎಪ್ರಿಲ್ 16ರ ಶುಕ್ರವಾರ ಸುರತ್ಕಲ್ನ ಇಡ್ಯದಲ್ಲಿರುವ ಅಭೀಷ್ ಬ್ಯುಸಿನೆಸ್ ಸೆಂಟರ್ನಲ್ಲಿ ಶುಭಾರಂಭಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಸಕ ಡಾ.ಭರತ್ ವೈ ಶೆಟ್ಟಿ ಅವರು, "ಪಿ.ಕೆ.ದೂಜ ಪೂಜಾರಿ ಅವರ ಬಟ್ಟೆ ಮಳಿಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಅಗತ್ಯದ ವಿವಿಧ ಉಡುಪುಗಳನ್ನು ಒಂದೆ ಮಳಿಗೆಯಲ್ಲಿ ನೀಡುತ್ತಾ ಬಂದಿದ್ದು, ಇದೀಗ ಸುರತ್ಕಲ್ನಲ್ಲಿ 15ನೇ ಮಳಿಗೆಯನ್ನು ಪ್ರಾರಂಭಿಸಿರುವುದಕ್ಕೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.
ಮಾಜಿ ಸಂಸದ ಹಾಗೂ ಸಚಿವ ವಿನಯ್ಕುಮಾರ್ ಸೊರಕೆ ಮಾತನಾಡಿ, ಸಂಸ್ಥೆಯ ಸ್ಥಾಪಕರಾದ ದೂಜ ಪೂಜಾರಿ ಅವರ ಕಾಲದಿಂದಲೂ ಈ ಸಂಸ್ಥೆ ತನ್ನ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದು, ಇದರ ಯಶಸ್ಸಿಗೆ ಕಾರಣವಾಗಿದೆ. ಸುರತ್ಕಲ್ನಲ್ಲಿ ಈ ಶಾಖೆಯನ್ನು ಆರಂಭಿಸಿರುವುದಕ್ಕೆ ಶುಭಹಾರೈಸುವುದಾಗಿ ಹೇಳಿದ್ದಾರೆ.
ಮಾಜಿ ಶಾಸಕ ಯು.ಆರ್. ಸಭಾಪತಿ ಕಾರ್ಪೊರೇಟರ್ ನಯನಾ ಕೋಟ್ಯಾನ್, ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ, ಪಡುಬಿದ್ರೆಯ ಖಡ್ಗೇಶ್ವರಿ ದೈವಸ್ಥಾನದ ಮೊದಲ ಪಾತ್ರಿ ನಾರಾಯಣ ರಾವ್, ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಹಾಗೂ ಶೋರೂಂನ ಮಾಲಕ ಪಿ.ಕೆ.ರಾಜೇಶ್ ಉಪಸ್ಥಿತರಿದ್ದರು.