ಮಂಗಳೂರು, ಏ.16 (DaijiworldNews/HR): ಎಪ್ರಿಲ್ 13ರ ಮಂಗಳವಾರದಂದು ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಅಪಘಾತಕ್ಕೆ ಸಂಬಂಧಿಸಿದಂತೆ ಒಂಭತ್ತು ಮೀನುಗಾರರು ಕಾಣೆಯಾಗಿದ್ದು, ನಾಪತ್ತೆಯಾದ ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಸಿಂಗಾಪುರ ಮೂಲದ ಎಪಿಎಲ್ ಲೇ ಹ್ಯಾವ್ರೆ ಎನ್ನುವ ಹಡಗು ದೋಣಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಕೇರಳದ ಕೋಝಿಕ್ಕೋಡ್ನ ಬೇಫೂರ್ ಜಾಫರ್ ಅವರಿಗೆ ಸೇರಿದ್ದ ರಬಾ ಎಂಬ ದೋಣಿ ಎಪ್ರಿಲ್ 11ರ ರವಿವಾರ ಬೇಪೂರ್ನಿಂದ ಸಮುದ್ರಕ್ಕೆ ಇಳಿದಿತ್ತು.
ಕರಾವಳಿ ಭದ್ರತಾ ಪೊಲೀಸ್ ಪಡೆ, ನೌಕಪಡೆ, ಕೋಸ್ಟ್ ಗಾರ್ಡ್ ಹಾಗೂ ಕೇರಳದ ಮುಳುಗು ತಜ್ಞರು ಮುಳುಗಡೆಯಾದ ದೋಣಿಯೊಳಗೆ ಶೋಧ ನಡೆಸಿದ್ದಾರೆ, ಆದರೆ ಕಾಣೆಯಾದ ಮೀನುಗಾರರು ಪತ್ತೆಯಾಗಿಲ್ಲ.
ಇನ್ನು ಪರಿಣಿತ ಡ್ರೈವರ್ ಗಳು ಈಗಾಗಲೇ ದೋಣಿಯ ಒಳಭಾಗವನ್ನು ತಲುಪಿ ಮೀನುಗಾರರಿಗಾಗಿ ಹುಡುಕಾಟ ನಡೆಸಿದ್ದಾರೆ ಆದರೆ ಯಾವುದೇ ಮೀನುಗಾರರು ಪತ್ತೆಯಾಗಿಲ್ಲ ಎಂದು ಕರಾವಳಿ ಭದ್ರತಾ ಪೊಲೀಸ್ ಪಡೆ ಮೂಲಗಳು ತಿಳಿಸಿವೆ.