ಉಡುಪಿ, ಏ 16 (DaijiworldNews/MS): ಇಲ್ಲಿನ ಪ್ರಖ್ಯಾತ ನೋವೆಲ್ಟಿ ಜ್ಯುವೆಲ್ಲರಿ ಮಾಲೀಕ ಜಿ. ಜಯ ಆಚಾರ್ಯ ಅವರಿಗೆ ಆಭರಣ ತಯಾರಿಸಿಕೊಡುವ ನೆಪದಲ್ಲಿ ವ್ಯಕ್ತಿಯೋರ್ವ 4 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಚಿನ್ನದ ಕರಿಮಣಿ ತಯಾರಿಸಿ ಕೊಡುವುದಾಗಿ ಹೇಳಿ , ಜಯ ಆಚಾರ್ಯ ಅವರಿಗೆ ಪರಿಚಯಸ್ಥ ಮಂಜುನಾಥ ಆಚಾರ್ಯ ಎಂಬಾತ ಫೆ.13 ರಂದು 92.970 ಗ್ರಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿದ್ದು ಬಳಿಕ ಅಭರಣವಾಗಲಿ ಅಥವಾ ಚಿನ್ನದ ಗಟ್ಟಿಯಾಗಲಿ ಹಿಂತಿರುಗಿಸದೆ ವಂಚನೆ ಎಸಗಿದ್ದಾನೆ.
ಈ ಬಗ್ಗೆ ಜ್ಯುವೆಲ್ಲರಿ ಮಾಲೀಕ ಚಿನ್ನದ ಮೌಲ್ಯ 4 ಲಕ್ಷ ಚಿನ್ನ ಹಿಂತಿರುಗಿಸದೆ ವಂಚನೆ ಎಸಗಿದ್ದಾರೆಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪರಾಧ ಕ್ರಮಾಂಕ 66/2021ಕಲಂ:420, 406 ಐಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.