ಮಂಗಳೂರು, ಏ.15 (DaijiworldNews/MB) : ಅತ್ತಾವರದ ಕೇಂದ್ರ ಕಂದಾಯ ಕಟ್ಟಡದಲ್ಲಿರುವ ಆದಾಯ ತೆರಿಗೆ ಕಚೇರಿಯ ಟಿಡಿಎಸ್ ವಿಭಾಗದಲ್ಲಿನ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಉಂಟಾದ ಘಟನೆ ಏಪ್ರಿಲ್ 15 ರ ಗುರುವಾರ ನಡೆದಿದೆ.
ಸ್ಥಳಕ್ಕೆ ಭೇಟಿ ನೀಡಿದ ಉಪ ಪೊಲೀಸ್ ಆಯುಕ್ತ ಹರಿರಾಮ್ಶಂಕರ್, ''ಈ ಘಟನೆ ಬೆಳಿಗ್ಗೆ 9.30 ರ ಸುಮಾರಿಗೆ ನಡೆದಿದೆ. ಹೊಗೆ ಕಾಣಿಸಿಕೊಂಡ ಹಿನ್ನೆಲೆ ಅಗ್ನಿ ಅವಘಡದ ಬಗ್ಗೆ ಗಮನಕ್ಕೆ ಬಂದಿದೆ. ಕೆಲವು ಕಂಪ್ಯೂಟರ್ಗಳು, ಫೈಲ್ಗಳು ಮತ್ತು ಬೀರುಗಳಿಗೆ ಹಾನಿ ಉಂಟು ಮಾಡಿದೆ. ಈ ಘಟನೆಯಿಂದ ಯಾರೂ ಗಾಯಗೊಂಡಿಲ್ಲ. ಬೆಂಕಿಯನ್ನು ಬೇಗನೇ ನಂದಿಸಲಾಗಿದೆ'' ಎಂದು ತಿಳಿಸಿದರು.
''ಘಟನೆಯಲ್ಲಿ ಫೈಲ್ಗಳು ನಾಶವಾದರೂ, ಎಲ್ಲಾ ಡೇಟಾಗಳ ಸಂಗ್ರಹ ಮಾಡಲಾಗಿದೆ. ಯಾವುದೇ ಡೇಟಾ ನಷ್ಟವಾಗಿಲ್ಲ'' ಎಂದು ಸ್ಪಷ್ಟಪಡಿಸಿದರು.
ಕಟ್ಟಡದಲ್ಲಿನ ಅಗ್ನಿಯನ್ನು ನಂದಿಸಲು ಅಗ್ನಿಶಾಮಕದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ಬೇಗನೇ ನಂದಿಸಿದೆ. ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದರು.