ಕಾಸರಗೋಡು, ಏ. 14 (DaijiworldNews/SM): ಪೆರ್ಲದ ಯುವಕನೋರ್ವನನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಮೂವರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದು, ಇದರಿಂದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಐದಕ್ಕೇರಿದೆ.
ಬಂಧಿತರನ್ನು ಕಾಸರಗೋಡಿನ ಎ.ಎಸ್. ಅಹಮ್ಮದ್ ರಹೀಸ್(29), ಇ. ಎಂ. ಅಬ್ದುಲ್ ಅಮೀನ್(27) ಮತ್ತು ಇಬ್ರಾಹಿಂ ಬಾದ್ ಷಾ(24) ಎಂದು ಗುರುತಿಸಲಾಗಿದೆ.
ಇನ್ನು ಪೆರ್ಲ ಚೆಕ್ ಪೋಸ್ಟ್ ಸಮೀಪದ ಅಬ್ಬಾಸ್ ಎಂಬ ಯುವಕನನ್ನು ಆದಿತ್ಯವಾರ ರಾತ್ರಿ ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮಂಗಳವಾರ ಬೆಳಿಗ್ಗೆ ಬದಿಯಡ್ಕ ಠಾಣಾ ವ್ಯಾಪ್ತಿಯ ಚರ್ಲಡ್ಕದಲ್ಲಿ ಯುವಕನನ್ನು ಬಿಟ್ಟು ತಂಡವು ಪರಾರಿಯಾಗಿತ್ತು. ತಂಡದಲ್ಲಿ 12 ಮಂದಿ ಇರುವುದಾಗಿ ತನಿಖೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಅಬ್ಬಾಸ್ ನ ಸಹೋದರನ ಚಿನ್ನಾಭರಣ ವಹಿವಾಟಿಗೆ ಸಂಬಂಧಪಟ್ಟಂತೆ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.