ಕಾಸರಗೋಡು, ಏ. 13 (DaijiworldNews/SM): ಕೋವಿಡ್ ಸೋಂಕಿನ ಎರಡನೇ ಅಲೆ ತಡೆಗೆ ಕೇರಳದಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಂಗಡಿ ಮುಂಗಟ್ಟು ಹೋಟೆಲ್ ಗಳ ಮೇಲೆ ನಿರ್ಬಂಧ ಹೇರಲಾಗಿ ದ್ದು, ರಾತ್ರಿ 9 ಗಂಟೆಯೊಳಗೆ ಮುಚ್ಚಲು ಆದೇಶ ಹೊರಡಿಸಲಾಗಿದೆ.
ವಿವಾಹ, ಇನ್ನಿತರ ಸಮಾರಂಭಗಳಿಗೆ ಹಾಲ್ ಗಳಲ್ಲಿ 100, ತೆರೆದ ಸ್ಥಳ ಗಳಲ್ಲಿ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬಸ್ಸು, ರೈಲು ಗಳಲ್ಲಿ ನಿಂತು ಪ್ರಯಾಣಕ್ಕೆ ಅನುಮತಿ ಇಲ್ಲ. ಆಸನ ಕ್ಕೆ ಮಾತ್ರ ಪ್ರಯಾಣಿಕರನ್ನು ಸೀಮಿತ ಗೊಳಿಸಬೇಕು.
ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಯಮಗಳನ್ನು ಪಾಲಿಸಬೇಕು. ದೇವಾಲಯದ ಒಳಾಂಗಣ ಕಾರ್ಯಕ್ಕೆ 100 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಹೊರಾಂಗಣ ಕಾರ್ಯಕ್ರಮಕ್ಕೆ 200 ಮಂದಿ ಪಾಲ್ಗೋಳ್ಳ ಬಹುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಿದೆ. ಎಲ್ಲಾ ಕಾರ್ಯಕ್ರಮಗಳ ಅವಧಿಯನ್ನು ಎರಡು ಗಂಟೆ ಯೊಳಗೆ ಮುಗಿಸಬೇಕು. ಕಾರ್ಯಕ್ರಮ ಗಳಲ್ಲಿ ಆಹಾರ ಪೂರೈಕೆ ಪಾರ್ಸೆಲ್ ಆಗಿ ನೀಡಬೇಕು. ರಂಜಾನ್ ಹಿನ್ನಲೆಯಲ್ಲಿ ಇಫ್ತಾರ್ ಕೂಟಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮಿತಿಮಿರದಂತೆ ನೋಡಿ ಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ.
ಸೋಂಕಿತ ರ ಸಂಖ್ಯೆ ಹೆಚ್ಚುತ್ತಿರುವ ಸ್ಥಳಗಳನ್ನು ಗುರುತಿಸಿ ಕಂಟೋನ್ಮೆಂಟ್ ಆಗಿ ಘೋಷಿಸಲು ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಕೇರಳದಲ್ಲಿ ಕೋವಿ ಡ್ ಸೋಂಕಿತರ ಸಂಖ್ಯೆ ಆರರಿಂದ ಏಳು ಸಾವಿರದಷ್ಟು ಏರಿಕೆಯಾಗಿದ್ದು, ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಅಕ್ಟೋಬರ್ ನಿಂದ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಾರಿ ಪ್ರಮಾಣದ ಏರಿಕೆಯತ್ತ ಸಾಗುತ್ತಿದೆ.