ಕಾಸರಗೋಡು, ಏ.13 (DaijiworldNews/HR): ಪೆರ್ಲದಿಂದ ಅಪಹರಿಸಿದ್ದ ಯುವಕನನ್ನು ಗಂಟೆಗಳ ಅವಧಿಯಲ್ಲಿ ಅಪಹರಣಕಾರರು ತೊರೆದು ಪರಾರಿಯಾದ ಘಟನೆ ನಡೆದಿದೆ.
ಅಬ್ಬಾಸ್
ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಇಂದು ಮುಂಜಾನೆ ನೆಲ್ಲಿಕಟ್ಟೆ ಸಮೀಪದ ಚರ್ಲಡ್ಕ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಪೆರ್ಲ ಚೆಕ್ ಪೋಸ್ಟ್ ಸಮೀಪದ ಅಬ್ಬಾಸ್ (25) ಎಂಬ ಯುವಕನನ್ನು ಆದಿತ್ಯವಾರ ರಾತ್ರಿ ಕಾರಿನಲ್ಲಿ ಬಂದ ತಂಡವು ಅಪಹರಿಸಿತ್ತು. ಬಗ್ಗೆ ಯುವಕನ ಮನೆಯವರು ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅಪಹರಣ ಕಾರರಲ್ಲಿ ಓರ್ವ ಕಾಸರಗೋಡು ತಳಂಗರೆ ನಿವಾಸಿ ಎಂದು ಮಾಹಿತಿ ಲಭಿಸಿತ್ತು. ಇದರಂತೆ ಪೊಲೀಸರು ಈ ಯುವಕನ ಮನೆಗೂ ದಾಳಿ ನಡೆಸಿ ತಪಾಸಣೆ ನಡೆಸಿದ್ದರು ಆದರೆ ಅಬ್ಬಾಸ್ ನನ್ನು ಪತ್ತೆ ಹಚ್ಚಲಾಗಲಿಲ್ಲ.
ಈ ನಡುವೆ ಅಪಹರಣಕ್ಕೊಳಗಾಗಿದ್ದ ಯುವಕನನ್ನು ತಂಡವು ಬದಿಯಡ್ಕ ಠಾಣಾ ವ್ಯಾಪ್ತಿಯ ಚರ್ಲಡ್ಕ ಬಳಿ ಯುವಕನನ್ನು ತೊರೆದು ಪರಾರಿಯಾಗಿದೆ.
ಇನ್ನು ಅಬ್ಬಾಸ್ನ ಸಹೋದರ ಜೊತೆಗಿನ ಚಿನ್ನಾಭರಣ ವಹಿವಾಟು ಕೃತ್ಯದ ಹಿಂದೆ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.