ಕಾಸರಗೋಡು, ಏ13 (DaijiworldNews/MS): ಮೀನುಗಾರಿಕೆ ಸಂದರ್ಭದಲ್ಲಿ ಸಿಡಿಲು ಬಡಿದು ಮೀನುಗಾರರೊಬ್ಬರು ಮೃತಪಟ್ಟ ದಾರುಣ ಘಟನೆ ಏ.13ರ ಮಂಗಳವಾರ ಮುಂಜಾನೆ ಕಾಸರಗೋಡು ಸಮುದ್ರದಲ್ಲಿ ನಡೆದಿದೆ. ಮೃತಪಟ್ಟವರನ್ನು ಅಡ್ಕತ್ತಬೈಲ್ ಶ್ರೀ ಕುರುಂಭಾ ಕ್ಷೇತ್ರ ಸಮೀಪದ ಬಾಬು ರಾಜ್ ( 40) ಎಂದು ಗುರುತಿಸಲಾಗಿದೆ.
ಇವರೊಂದಿಗೆ ಮೀನುಗಾರಿಕೆಯಲ್ಲಿ ತೊಡಗಿದ್ದ ಕೃಷ್ಣ ಎಂಬವರು ಗಾಯಗೊಂಡಿದ್ದಾರೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಬು ರಾಜ್ , ಕೃಷ್ಣ , ಸುಜಿ ಮತ್ತು ಬಾಬು ಎಂಬವರು ಭಾಗ್ಯಲಕ್ಷ್ಮಿ ಎಂಬ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು.
ಬೋಟು ಆಳಿವೆ ಬಾಗಿಲು ತಲಪುತ್ತಿದ್ದಂತೆ ಭಾರೀ ಗಾಳಿ , ಮಳೆ ಜೊತೆ ಮಿಂಚಿನ ಆರ್ಭಟ ಆರಂಭಿಸಿದ್ದು , ಮಿಂಚಿನಾಘಾತಕ್ಕೆ ಬಾಬು ರಾಜ್ ಕುಸಿದು ಬಿದ್ದಿದ್ದು , ಕೂಡಲೇ ಬೋಟ್ ನಲ್ಲಿದ್ದವರು ದಡಕ್ಕೆ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ .
ಜಿಲ್ಲೆಯ ಹಲವೆಡೆ ಗಾಳಿ ಮಳೆ ಜೊತೆ ಗುಡುಗು ಮಿಂಚಿಗೆ ಅಪಾರ ಹಾನಿ ಉಂಟಾಗಿದೆ. ಕಾಸರಗೋಡು ,ಬದಿಯಡ್ಕ , ಪೆರ್ಲ, ಮುಳ್ಳೇರಿಯ , ಉದುಮ ಮೊದಲಾದೆಡೆ ಮಳೆಗೆ ಅಪಾರ ಹಾನಿ ಉಂಟಾಗಿದೆ. ಮಂಜೇಶ್ವರ ಉದ್ಯಾವರ ಸಮೀಪದ ಸತೀಶ್ ಚೌಟ , ಅಮಿರ್ ಅಲಿ ರವರ ತರಕಾರಿ ಕೃಷಿ ಹಾನಿಗೊಂಡಿದೆ. ಮಾನ್ಯ ಚುಕ್ಕಿನಡ್ಕದ ಕೊಗ್ಗು ಮಣಿಯಾಣಿ ರವರ ಪಂಪ್ ಶೆಡ್ ಸಿಡಿಲಿಗೆ ಹಾನಿಗೊಂಡಿದ್ದು , ಮನೆಯ ವಯರಿಂಗ್ ಉರಿದಿದೆ