ಮಂಗಳೂರು, ಎ.13 (DaijiworldNews/PY): ಕರಾವಳಿಯಾದ್ಯಂತ ಎಪ್ರಿಲ್ 13ರ ಮಂಗಳವಾರ ಹಾಗೂ ಬುಧವಾರ ಯುಗಾದಿ ಹಬ್ಬದ ಸಂಭ್ರಮ. ಇದರೊಂದಿಗೆ ಮಂಗಳವಾರದಂದು ಸಂಕ್ರಮಣ ಸಡಗರ. ಒಟ್ಟಿನಲ್ಲಿ ಕರಾವಳಿಯಾದ್ಯಂತ ಎರಡು ದಿನಗಳ ಕಾಲ ಹಬ್ಬದ ವಾತಾವರಣ.
ಎಪ್ರಿಲ್ 13ರ ಮಂಗಳವಾರದಂದು ಚಾಂದ್ರಮಾನ ಯುಗಾದಿ ಹಾಗೂ ಎಪ್ರಿಲ್ 14ರ ಬುಧವಾರದಂದು ಸೌರಮಾನ ಯುಗಾದಿಯ ಆಚರಣೆ ನಡೆಯಲಿದ್ದು, ಕರಾವಳಿಯ ವಿವಿಧ ದೇವಾಲಯಗಳಲ್ಲಿ ಯುಗಾದಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರದಂದು ಹೂ ಅಂಗಡಿ ಹಾಗೂ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು, ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ, ವಾಹನ, ಚಿನ್ನ ಮನೆ ಖರೀದಿ ಮಾಡುವ ಸಂಪ್ರದಾಯವಿದೆ. ಕಳೆದ ಎರಡು ದಿನಗಳಲ್ಲಿ ಬಟ್ಟೆ ಮಳಿಗೆಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ವ್ಯಾಪಾರ-ವಹಿವಾಟು ನಡೆದಿದೆ. ಪೇಟೆಯಲ್ಲಿಯೂ ಎಂದಿನ ದಿನಕ್ಕಿಂತಲೂ ಜನರ ಓಡಾಟ ಹೆಚ್ಚಾಗಿತ್ತು.