ಕಾಸರಗೋಡು, ಏ 12 (DaijiworldNews/MS): ಕಾರಿನಲ್ಲಿ ಬಂದ ತಂಡವೊಂದು ಯುವಕನೋರ್ವನನ್ನುಅಪಹರಿಸಿದ ಘಟನೆ ಪೆರ್ಲದಲ್ಲಿ ಏ.೧೧ರ ಭಾನುವಾರ ರಾತ್ರಿ ನಡೆದಿದೆ.
ಪೆರ್ಲ ಚೆಕ್ ಪೋಸ್ಟ್ ಸಮೀಪದ ಅಬ್ಬಾಸ್ (25) ಅಪಹರಣಕ್ಕೊಳಗಾದ ಯುವಕ. ರಾತ್ರಿ ಮನೆಗೆ ಬಂದ ತಂಡ ಅಪಹರಣ ನಡೆಸಿದೆ ಎಂದು ತಾಯಿ ದೂರಿದ್ದಾರೆ. ನೆಲ್ಲಿಕಟ್ಟೆಯ ಆಸಿಫ್ ಸೇರಿದಂತೆ ಮೂವರ ವಿರುದ್ಧ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ . ಕೊಚ್ಚಿಯಲ್ಲಿ ಹೋಟೆಲ್ ನೌಕರನಾಗಿರುವ ಅಬ್ಬಾಸ್ ಚುನಾವಣೆ ಹಿನ್ನೆಯಲ್ಲಿ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದನು.
ಆರೋಪಿಯೋರ್ವನ ಮನೆಗೆ ಪೊಲೀಸರು ದಾಳಿ ನಡೆಸಿದರೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.