ಬಂಟ್ವಾಳ, ಏ. 11 (DaijiworldNews/SM): ಫರಂಗಿಪೇಟೆಯ ಆಂಬುಲೆನ್ಸ್ ವೊಂದರಲ್ಲಿ ರವಿವಾರ ಹೆಣ್ಣು ಶಿಶುವಿನ ಜನನವಾಗಿದೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮಹಿಳೆಯೊಬ್ಬರು ಹೆರಿಗೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈದ್ಯರಿಲ್ಲ ಎಂದು ಮಂಗಳೂರಿಗೆ ಕಳುಹಿಸಲಾಗಿತ್ತು. ಪುತ್ತೂರಿನಿಂದ ಆಂಬುಲೆನ್ಸ್ ಒಂದರಲ್ಲಿ ಬಂದ ಮಹಿಳೆಯನ್ನು ಬಂಟ್ವಾಳ ಟಾಲ್ ಗೇಟ್ ಸಮೀಪ ಫರಂಗಿಪೇಟೆಯ 108 ಆಂಬುಲೆನ್ಸ್ ಗೆ ವರ್ಗಾಯಿಸಲಾಯಿತು.
ಆದರೆ ಆಂಬುಲೆನ್ಸ್ ಮಂಗಳೂರು ತಲುಪುವ ಮೊದಲೇ ನೋವಿನಿಂದ ನರಳುತ್ತಿದ್ದರು. ಇದನ್ನು ಗಮನಿಸಿದ 108 ವಾಹನದಲ್ಲಿದ್ದ ಟೆಕ್ನಿಶಿಯನ್ ಕೇಶವ ಅವರು ಹೆರಿಗೆ ಮಾಡಿಸಿದ್ದಾರೆ. ಹಾಗೂ ಆರೋಗ್ಯವಂತ ಶಿಶು ಹಾಗೂ ತಾಯಿಯನ್ನು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಆಂಬುಲೆನ್ಸ್ ಚಾಲಕ ವೆಂಕಣ್ಣ ಗೌಡ ಸಹಕರಿಸಿದರು.