ಉಡುಪಿ, ಏ.11 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಮೊದಲ ದಿನದ ನೈಟ್ ಕರ್ಫ್ಯೂ ಯಶಸ್ವಿಯಾಗಿದ್ದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ವತಹ ಫೀಲ್ಡಿಗಿಳಿದಿದ್ದಾರೆ. ಮೊದಲ ದಿನದ ನೈಟ್ ಕರ್ಫ್ಯೂ ವೇಳೆ ಉಡುಪಿ, ಮಣಿಪಾಲ ನಗರ ಸಂಪೂರ್ಣವಾಗಿ ಸ್ಥಬವಾದಂತಿತ್ತು.
ಈ ಹಿಂದೆ ಮಾಸ್ಕ್ ನಿಮಯ ಉಲ್ಲಂಘನೆ ವಿರುದ್ದ ಸ್ವತಃ ಫೀಲ್ಡ್ಗಿಳಿದು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡು ದಂಢ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಈಗ ರಾತ್ರಿ ಕರ್ಫ್ಯೂ ವೇಳೆಯೂ ಕಾರ್ಯಾಚರಿಸಿದ್ದಾರೆ.
ಕಲ್ಸಂಕ ಮತ್ತು ಮಣಿಪಾಲ ಚೆಕ್ಪೋಸ್ಟ್ಗಳಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ವಾಹನಗಳ ತಪಾಸಣೆ ನಡೆಸಿದ್ದು ರಾತ್ರಿ ೧೦ ಗಂಟೆ ನಂತರ ರಸ್ತೆಯಲ್ಲಿ ತಿರುಗುತಿದ್ದವರಿಗೆ ತಿಳಿಹೇಳಿದರು. ಹಾಗೆಯೇ ನಾಳೆಯಿಂದ ಇದೇ ರೀತಿ ಮುಂದುವರೆದರೆ ವಾಹನ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಇನ್ನು ಪೊಲೀಸರು 10 ಗಂಟೆಯ ನಂತರ ಬಂದ ವಾಹನಗಳ ದಾಖಲೆ ಪತ್ರ ತಪಾಸಣೆ ಮಾಡಿದರು. ಬಸ್ ಪ್ರಯಾಣಿಕರಿಗೆ ಟಿಕೇಟ್ ತೋರಿಸಿ ರಿಕ್ಷಾ, ಕಾರುಗಳಲ್ಲಿ ಸಂಚರಿಸಲು ಅನುಮತಿ ನೀಡಿದರು. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲರಿಗೆ ಸ್ಟ್ರಿಕ್ಟ್ ವಾರ್ನಿಂಗ್ ನೀಡಿದರು.