ಕಾಸರಗೋಡು, ಏ 10 (DaijiworldNews/MS): ಕೇರಳ ವಿಧಾನಸಭೆ ಚುನಾವಣೆ ವೇಳೆ ಕೊಲೆಯಾದ ಯೂತ್ ಲೀಗ್ ಕಾರ್ಯಕರ್ತ ಮನ್ಸೂರು ಕೊಲೆ ಪ್ರಕರಣದ ಆರೋಪಿಯೋರ್ವಕೇರಳದ ವಾಲಯಂ ಎಂಬ ಪ್ರದೇಶಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಪನೂರ್ ಮೂಲದ ರತೀಶ್ (36) ಎಂದು ಗುರುತಿಸಲಾಗಿದೆ.
ಮರದಲ್ಲಿ ನೇಣು ಬಿಗಿದ ಅಪರಿಚಿತ ವ್ಯಕ್ತಿಯ ಶವದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲಿಸಿದಾದ ಚುನಾವಣೆಯ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಹತ್ಯೆಯಾದ ಮನ್ಸೂರು ಕೊಲೆ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ. ರತೀಶ್ ಹತ್ಯೆಯಾದ ಮನ್ಸೂರುನ ನೆರೆಹೊರೆಯವನಾಗಿದ್ದು ಘಟನೆಯ ಬಳಿಕ ಪರಾರಿಯಾಗಿದ್ದ.
ಕೇರಳ ವಿಧಾನಸಭಾ ಚುನಾವಣೆಗೆ ನಡೆದ ಮತದಾನದ ನಂತರ, ರಾಜ್ಯದ ಹಲವೆಡೆ ಹಿಂಸಾಚಾರ ನಡೆದಿತ್ತು. ಏ. 6 ರ ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಮನ್ಸೂರ್ ಮನೆಗೆ ನುಗ್ಗಿದ ತಂಡವೊಂದು ಮನೆಗೆ ಕಚ್ಚಾ ಬಾಂಬ್ ಎಸೆದಿದ್ದು, ಬಳಿಕ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿತ್ತು. ಗಂಭೀರ ಗಾಯಗೊಂಡ ಮನ್ಸೂರ್ ಹಾಗೂ ಆತನ ಸಹೋದರ ಮುಹಸಿನ್’ ರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಿದರೂ ಮನ್ಸೂರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.