ಬಜಪೆ, ಏ 10 (DaijiworldNews/MS): ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿದ್ದ ಅಡ್ಡೂರು ಬಳಿಯ ಮನೆಯೊಂದಕ್ಕೆ ಏ. 9ರ ಶುಕ್ರವಾರ ಬೆಳಗ್ಗೆ ಬಜಪೆ ಪೊಲೀಸರು ದಾಳಿ ನಡೆಸಿದ್ದು , ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ 164 ಕೆ.ಜಿ ದನದ ಮಾಂಸ, ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಅಡ್ಡೂರು ಗ್ರಾಮದ ಪಾಂಡೇಲು ಗದ್ದೆ ಮನೆಯ ಅಬ್ದುಲ್ ಮಜೀದ್ ಯಾನೆ ಕಕ್ಕ(35) ಮತ್ತು ಪಿ. ಮುಸ್ತಾಫ(30) ಬಂಧಿತರು. ಖಚಿತ ಮಾಹಿತಿ ಮೇರೆಗೆ ಬಜಪೆ ಪೊಲೀಸ ಠಾಣೆಯ ಪಿಎಸ್ ಐ ಪೂವಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಬಜಪೆ ಪೊಲೀಸ್ ನಿರೀಕ್ಷಕ ಕೆ.ಆರ್ ನಾಯ್ಕ್ ನೇತೃತ್ವದಲ್ಲಿ ಪಿಎಸ್ ಐ ಪೂವಪ್ಪ ಎಚ್.ಎಂ, ಕಮಲ, ಎ.ಎಸ್.ಐ. ಮೊಹಮ್ಮದ್, ರಾಮ ಪೂಜಾರಿ, ಸಿಬ್ಬಂದಿಗಳಾದ ಸಂತೋಷ ಡಿ.ಕೆ, ರಶೀದ್ ಶೇಖ್, ಪುರುಶೋತ್ತಮ, ರಾಜೇಶ್, ಗಿರೀಶ್, ವಕೀಲ ಎನ್ ಲಮಾಣಿ, ಲಕ್ಷ್ಮಣ ಕಾಂಬ್ಳೆ, ಸಿದ್ದಲಿಂಗಯ್ಯ, ಸಂಜೀವ ಇವರು ಕಾರ್ಯಚರಣೆ ನಡೆಸಿದ್ದರು.