ಕಾಸರಗೋಡು, ಏ 10 (DaijiworldNews/MS): ಸ್ಕೂಟರ್ ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಜೈಲು ಮುಖ್ಯಸ್ಥರೋರ್ವರು ಮೃತಪಟ್ಟ ಘಟನೆ ಏ.9 ರ ಶುಕ್ರವಾರ ರಾತ್ರಿ ಉದುಮ ಸಮೀಪದ ಕುನಿಯದಲ್ಲಿ ನಡೆದಿದೆ.
ಕಾಞ೦ಗಾಡ್ ಜಿಲ್ಲಾ ಜೈಲ್ ನ ಮುಖ್ಯಸ್ಥ ಶ್ರೀನಿವಾಸನ್ (52) ಮೃತಪಟ್ಟವರು. ಉದುಮ ಬಾರ ನಿವಾಸಿಯಾಗಿರುವ ಶ್ರೀನಿವಾಸನ್ ಕರ್ತವ್ಯ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಕಾಸರಗೋಡು ಕಡೆಯಿಂದ ಕಾಞ೦ಗಾಡ್ ನತ್ತ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ . ಅಪಘಾತದ ಗಂಭೀರ ಗಾಯಗೊಂಡ ಶ್ರೀನಿವಾಸನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ