ಮಂಗಳೂರು, ,ಏ 9(DaijiworldNews/MS): ದಕ್ಷಿಣಕನ್ನಡಜಿಲ್ಲಾಉಸ್ತುವಾರಿ ಮಂತ್ರಿಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಕೊರೊನಾ ನಿಯಂತ್ರಣ ಪರಿಶೀಲನಾ ತುರ್ತು ಸಭೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಏ.7 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಿತು.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಕೊರೊನಾ ಬಗ್ಗೆ ಮಾಹಿತಿ ಒದಗಿಸಿ ಜಿಲ್ಲೆಯಲ್ಲಿ ಒಟ್ಟು 680 ಸಕ್ರಿಯ ಪ್ರಕರಣಗಳಿದ್ದು, ಇವುಗಳಲ್ಲಿ 604 ಪ್ರಕರಣಗಳು ಹೋಂ ಕ್ವಾರಂಟೈನ್ ಆಗಿವೆ. ಉಳಿದ 76 ಪ್ರಕರಣಗಳಲ್ಲಿ 15 ಸೋಂಕಿತರಿಗೆ ಸರಕಾರಿಅಸ್ಪತ್ರೆ ಹಾಗೂ 69 ಜನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೇರಿದಂತೆ ಪೂರ್ಣ ಚಿಕಿತ್ಸೆ ಲಭ್ಯವಿರುವುದರಿಂದ ಜಿಲ್ಲಾಸ್ಪತ್ರೆಯ ಬದಲು ತಾಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಆರೋಗ್ಯಾಧಿಕಾರಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ 60ವರ್ಷ ಮೇಲ್ಪಟ್ಟ ಹಿರಿಯರ ಸಂಖ್ಯೆ 2,01,629 ಇದ್ದು, ಇವರ ಪೈಕಿ 67,674 ಮಂದಿ ಹಿರಿಯರಿಗೆಅಂದರೆ ಪ್ರತಿಶತ 33ರಷ್ಟು ಹಿರಿಯ ನಾಗರಿಕರಿಗೆ ಕೊರೊನಾ ಪ್ರತಿರೋಧಕ ಲಸಿಕೆಗಳನ್ನು ನೀಡಲಾಗಿದೆ. 45ವರ್ಷ ಮೇಲ್ಪಟ್ಟವರ ಸಂಖ್ಯೆ 4,16,123ಇದ್ದು, ಇದೀಗ 24,603 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಪರಿಪೂರ್ಣ ಶ್ರಮವಹಿಸಬೇಕೆಂದು ಸಚಿವಕೋಟ ಸೂಚಿಸಿ ಎಲ್ಲಾ ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಸ್ವತಃಕೊರೋನಾ ನಿಯಂತ್ರಣ ಮತ್ತು ಲಸಿಕೆ ನೀಡಿಕೆಯ ಬಗ್ಗೆ ಗಮನಹರಿಸಬೇಕು ಎಂದರು.