ಮಂಗಳೂರು ಏ 8 (DaijiworldNews/MS): ಕೆಎಸ್ಆರ್ ಟಿಸಿ ನೌಕರರು ಆರನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಖಾಸಗಿ ಮತ್ತು ಸಿಟಿ ಬಸ್ ಗಳೂ ಎಂದಿನಿಂದ ಇಂದೂ ಕೂಡಾ ಕಾರ್ಯಾಚರಣೆ ನಡೆಸಿದ್ದು ಹೀಗಾಗಿ ಕರಾವಳಿಯಲ್ಲಿ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಿಲ್ಲ.
ಈ ನಡುವೆ ಮಂಗಳೂರು ಕೆಎಸ್ಆರ್ ಟಿಸಿ ವಿಭಾಗದಲ್ಲಿ ಏ.೮ ರ ಗುರುವಾರದಂದು ಮುಷ್ಕರ ಕೊಂಚ ನೀರಸವಾಗಿದೆ. ಗುರುವಾರ ಬೆಳಗ್ಗೆ ಧರ್ಮಸ್ಥಳ, ಮಡಿಕೇರಿ, ಬೆಂಗಳೂರು, ಮೈಸೂರು ಸೇರಿದಂತೆ ಕಾಸರಗೋಡಿಗೆ ಬಸ್ ಗಳ ಸಂಚಾರ ನಿಧಾನವಾಗಿ ಪ್ರಾರಂಭವಾಗಿದೆ.
ಎರಡನೇ ದಿನ ಈವರೆಗೆ ವಿವಿಧ ರೂಟ್ ಗಳಲ್ಲಿ ಸುಮಾರು 20ಕ್ಕೂ ಅಧಿಕ ಬಸ್ ಗಳ ಓಡಾಟ ನಡೆಸಿದೆ. ಹೀಗಾಗಿ ಸರ್ಕಾರಿ ಬಸ್ ನಿಲ್ದಾಣದತ್ತ ನಿಧಾನವಾಗಿ ಪ್ರಯಾಣಿಕರು ಆಗಮಿಸತೊಡಗಿದ್ದಾರೆ.