ಕುಂದಾಪುರ, ಎ 1(DaijiworldNews/MS): ಇಲ್ಲಿನ ಮಾಸ್ತಿಕಟ್ಟೆಯ ಯಡೂರು ಬಳಿ ಟ್ರಕ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಾರ್ಚ್ 31ರ ಬುಧವಾರ ನಡೆದಿದೆ.
ಮೃತ ಯುವಕನನ್ನು ಉಡುಪಿಯ ಪೆರಂಪಳ್ಳಿಯ ಜೋಸೆಫ್ ಗೋಮ್ಸ್ (28) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಜೋಸೆಫ್ ಗೋಮ್ಸ್ ಮತ್ತವರ ಸ್ನೇಹಿತರು ಮಾಸ್ತಿಕಟ್ಟೆಯಲ್ಲಿರುವ ಸ್ನೇಹಿತರ ಮನೆಗೆ ಹೋಗುತ್ತಿದ್ದರು. ಜೋಸೆಫ್ ಬೈಕ್ನಲ್ಲಿ ಹೋಗುತ್ತಿದ್ದರೆ ಇತರ ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಮಸ್ತಿಕಟ್ಟೆಯ ಪ್ರದೇಶದ ಬಳಿ ಬರುತ್ತಿದ್ದಂತೆ ಜೋಸೆಫ್ ಬೈಕ್ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಜೋಸೆಫ್ ಅವರು ಮಲ್ಪೆ ಬಂದರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ತಮ್ಮೂರು ಪೆರಂಪಳ್ಳಿಯಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಲ್ಲಿ ಅವರು ಸಕ್ರಿಯರಾಗಿದ್ದರು. ಅವರ ಮೃತದೇಹವನ್ನು ಬುಧವಾರ ಪೆರಂಪಳ್ಳಿಗೆ ತರಲಾಗಿದೆ.