ಬಂಟ್ವಾಳ, ಮಾ.31 (DaijiworldNews/MB) : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಒಂದು ಸ್ತೆ ಬದಿಯ ಹಳ್ಳಕ್ಕೆ ಬಿದ್ದಿರುವ ಘಟನೆ ನಗರದ ಎಸ್ವಿಎಸ್ ಕಾಲೇಜು ಬಳಿ ನಡೆದಿದ್ದು ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೂಡಲೇ ಆಸ್ಪತ್ರೆಗೆ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.
ಈ ಬಸ್ ಪುಂಜಾಲುಕಟ್ಟೆ, ಮೂರ್ಜೆ ಹಾಗೂ ವಾಮದಪದವು ಮೂಲಕ ಬಿ ಸಿ ರೋಡ್ನಲ್ಲಿ ಚಲಿಸುತ್ತಿತ್ತು. ಮಾರ್ಚ್ 31 ರ ಬುಧವಾರ ಪರೀಕ್ಷೆಯಿದ್ದ ಕಾರಣ ಅನೇಕ ವಿದ್ಯಾರ್ಥಿಗಳು ಸೇರಿದಂತೆ ಬಸ್ನಲ್ಲಿ ಸುಮಾರು 25 ಪ್ರಯಾಣಿಕರಿದ್ದರು.
ಪ್ರಯಾಣಿಕರಾದ ಶ್ಯಾಮಲಾ, ಸ್ವಾತಿ, ಅಭಿನವ್, ಗೋಪಾಲ ಸಪಲ್ಯಾ ವಾಮನಪದವು, ಹೇಮಾವತಿ ವಾಮನಪದವು, ಚಂದ್ರಾವತಿ, ವಿದ್ಯಾರ್ಥಿಗಳಾದ ಕೊಯ್ಲಾದ ವಾಹಿದಾ, ಮಾವಿನಕಟ್ಟೆಯ ವಿಖ್ಯಾತಿ, ಮಾನಪದವಿನ ವೈಷ್ಣವಿ ಹಾಗೂ ಇತರರು ಗಾಯಗೊಂಡಿದ್ದಾರೆ.
ಎಲ್ಲರನ್ನೂ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಕೂಡಲೇ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಘಟನೆಯ ಹಿನ್ನೆಲೆಯ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಶಾಸಕ ರಾಜೇಶ್ ನಾಯಕ್ ಉಪಸ್ಥಿತರಿದ್ದರು.