ಕಾಸರಗೋಡು, ಮಾ. 30 (DaijiworldNews/SM): ಕೇರಳದಲ್ಲಿ ಕೇವಲ ಒಂದೇ ಒಂದು ಸ್ಥಾನದಲ್ಲಿ ಬಿಜೆಪಿ ಖಾತೆ ತೆರೆದಿದ್ದು, ನೇಮಂನಲ್ಲಿ ೨೦೧೬ರಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಈ ಖಾತೆಯನ್ನು ಮುಚ್ಚುತ್ತೇವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನ ಒಳಒಪ್ಪಂದದಿಂದ ಬಿಜೆಪಿ ಗೆದ್ದಿತ್ತು. ಈ ಬಾರಿ ಅದನ್ನು ಕ್ಲೋಸ್ ಮಾಡುತ್ತೇವೆ ಎಂದು ಹೇಳಿದರು.
ಬಳಿಕ ಪಿಣರಾಯಿ ವಿಜಯನ್ ರವರು, ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಿದರು. ಮೊಗ್ರಾಲ್ ಶಾಲಾ ಮೈದಾನ ದಲ್ಲಿ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ವಿ.ವಿ. ರಮೇಶನ್, ಕಾಸರಗೋಡು ಕ್ಷೇತ್ರದ ಎಂ.ಎ. ಲತೀಫ್ ಪರ ಪ್ರಚಾರ ನಡೆಸಿದರು. ಪೆರಿಯದಲ್ಲಿ ಉದುಮ ಕ್ಷೇತ್ರದ ಎಲ್ ಡಿ ಎಫ್ ಅಭ್ಯರ್ಥಿ ಸಿ. ಎಚ್ ಕುಞಂಬು ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದರು.