ಬಂಟ್ವಾಳ, ಮಾ. 30 (DaijiworldNews/SM): ಸೋಮವಾರ ರಾತ್ರಿ ತಾಲೂಕಿನಾದ್ಯಂತ ಸುರಿದ ಭಾರೀ ಮಳೆ ಮತ್ತು ಗಾಳಿಗೆ 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ತಾಲೂಕಿನ ಬಿ.ಮೂಡ ಗ್ರಾಮ, ನರಿಕೊಂಬು, ಅಮ್ಟಾಡಿ, ಕಳ್ಳಿಗೆ, ಅಮ್ಮುಂಜೆ ಗ್ರಾಮಗಳಲ್ಲಿ ವ್ಯಾಪಕ ನಷ್ಟ ಸಂಭವಿಸಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟ ಅಂದಾಜಿಸಿದ್ದಾರೆ. ಬಿ.ಮೂಡ ಗ್ರಾಮದ ಕಾಮಾಜೆ ಹಾಗೂ ಮೈರನ್ ಪಾದೆಯಲ್ಲಿ ಎರಡು ಮನೆಗಳ ಮೇಲ್ಚಾವಣಿಗಳು ಗಾಳಿಗೆ ಹಾರಿ ಹೋಗಿದ್ದು ಉಳಿದಂತೆ 30ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಇಲ್ಲಿನ ನಿವಾಸಿಗಳಾದ ಸೀತಾರಾಮ, ಕಮಲ, ಗೌರಿ, ಶಿವಾನಂದ, ಭಾರತಿ, ರೇವತಿ, ನಳಿನಿ, ದೇವದಾಸ, ಜಯಂತಿ, ವನಜ, ರಾಧ, ಅಬ್ದುಲ್ ರಹ್ಮಾನ್, ರೇವತಿ, ಯೋಗೇಶ್ ಆಚಾರ್ಯ, ಶಾಂತ, ಮಾಯಿಲ, ದೇವಪ್ಪ ಆಚಾರಿ, ಶಶಿಕಲಾ, ರುಕ್ಮಯ ಮೂಲ್ಯ, ಪ್ರೇಮ, ಮುತ್ತು, ಹೊನ್ನಮ್ಮ, ಸುಂದರ ಪೂಜಾರಿ, ಲಕ್ಣ್ಮಿ, ಪೂವಪ್ಪ ದೇವಾಡಿಗ, ನಾಗಮ್ಮ, ಲಕ್ಷ್ಮೀ, ಜಾನಕಿ, ಹೇಮಾವತಿ, ಶಿವಮ್ಮ, ಮೀನಾಕ್ಷಿ ಎಂಬವರ ಮನೆಗಳಿಗೆ ಹಾನಿಯಾಗಿದೆ.
ಅಮ್ಟಾಡಿ ಗ್ರಾಮದಲ್ಲಿ ವಾರಿಜ, ಶೀಲಾವತಿ, ಪ್ರಭಾಕರ ಪೂಜಾರಿ ಎಂಬವರ ಮನೆಗಳಿಗೆ ಹಾನಿಯಾಗಿದ್ದರೆ. ಇಲ್ಲಿನ ಫೆಲಿಕ್ಸ್ ಪಿಂಟೋ, ರಿಚಾರ್ಡ್ ಪಿಂಟೋ, ಥೋಮಸ್ ಸಲ್ದಾನ, ಮನೋಜ್ ಫರ್ನಾಂಡೀಸ್ ಎಂಬವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಅಮ್ಮುಂಜೆ ಗ್ರಾಮದ ರೇಣುಕಾ, ಗೋಪಾಲ ಬೆಳ್ಚಡ, ಕಳ್ಳಿಗೆ ಗ್ರಾಮದ ವಾರಿಜ, ಕಾರ್ಮಿನ್ ಡಿಸೋಜ, ಸೆರ್ವಿನ್ ಡಿಸೋಜ, ವಿಕ್ಟೋರಿಯಾ, ಸಿಪ್ರಿಯನ್ ಡಿಸೋಜ ಎಂಬವರ ಮನೆಗಳಿಗೆ ಹಾನಿಯಾದರೆ, ಯೋಗೇಶ್ ರಾವ್ ಹಾಗೂ ನವೀಚಂದ್ರ ಶೆಟ್ಟಿ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಪ್ರಕಟನೆ ತಿಳಿಸಿದೆ.
ಉಳಿದಂತೆ ಸೋಮವಾರ ರಾತ್ರಿಯ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ತೆಂಗು ಸಹಿತ ಇತರ ಮರಗಳು ಧರೆಶಾಯಿಯಾಗಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದ ಹಿನ್ನೆಲೆಯಲ್ಲಿ ಹಲವೆಡೆ ವಿದ್ಯುತ್ ವ್ಯತಯ ಉಂಟಾಯಿತು.