ಕಾರ್ಕಳ, ಮಾ 29 (DaijiworldNews/MS): ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರು ಪೊರೈಕೆ ಮಾಡಲಾಗುತ್ತಿರುವ ದುರ್ಗ ಗ್ರಾಮದ ಮುಂಡ್ಲಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಕಿಂಡಿಅಣೆಕಟ್ಟಿಗೆ ಅವೈಜ್ಞಾನಿಕ ಹೈಡ್ರಾಲಿಕ್ ಗೇಟ್ ಕುರಿತು ದುರ್ಗ ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ತೀವ್ರ ಅಕ್ಷೇಪ ವ್ಯಕ್ತಗೊಂಡಿದೆ.
ಪ್ರಸ್ತುತ ಅಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸಲಾಗಿದ್ದರೂ ಯಾವುದೇ ತಾಂತ್ರಿಕ ಅಳತೆಗೋಲು ಇಲ್ಲದೇ ನಿರ್ವಹಿಸಿಸಲಾಗುತ್ತಿದೆ. ಗ್ರಾಮಸ್ಥರ ಬೇಡಿಕೆಗೆ ಇದು ತದ್ವಿರುದ್ಧವಾಗಿರುತ್ತದೆ.ಜಿವಿಪಿ ಇನ್ಪ್ರಾ ಪೊಜೆಕ್ಸ್ ಕಂಪೆನಿ ಇದೇ ಅಣೆಕಟ್ಟಿನ ನೀರಿನಿಂದಲೇ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಕಂಪೆನಿಯ ಉದ್ಧಾರ ಮಾತ್ರವೇ ಗಮನಹರಿಸುತ್ತಾ ಬಂದಿದೆ. ಅಣೆಕಟ್ಟಿನ ತಳಭಾಗದಲ್ಲಿ ಶಾಶ್ವತ ಕಾಂಕ್ರೀಟ್ ನಿಂದ ಮುಚ್ಚಿ ಅದರ ಮೇಲ್ಭಾಗದಲ್ಲಿ ಹೈಡ್ರಾಲಿಕ್ ಗೇಟ್ ಅಳವಡಿಸಿಸುದರಿಂದ ಒಂದು ಹಂತದ ವರೆಗೆ ನೀರು ನಿಂತು ಮಳೆಗಾಲದಲ್ಲಿ ಕೃತಕ ನೆರೆಗೆ ಕಾರಣವಾಗುತ್ತಿರುವುದು ಇಲ್ಲಿ ಪ್ರತಿವರ್ಷ ಸರ್ವೇ ಸಾಮಾನ್ಯವಾಗಿದೆ. ಇದರಿಂದ ಫಲವತ್ತಾದ ಕೃಷಿನಾಶವಾಗುತ್ತಿದೆ.ಈ ಕುರಿತು ಗ್ರಾಮಸ್ಥರ ಅಭಿಪ್ರಾಯಗಳನ್ನು ಪ್ರಮುಖವಾಗಿಟ್ಟುಕೊಂಡು ದುರ್ಗ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಂಟೀಯಾಗಿ ಪುರಸಭಾ ಮುಖ್ಯಾಧಿಕಾರಿಯವರಿಗೆ ಲಿಖಿತವಾಗಿ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ತಾಂತ್ರಿಕ ಅನುಮೋದನೆ ನಕಾಶೆ ಹಾಗೂ ವರದಿ
ಹೈಡ್ರಾಲಿಕ್ ಗೇಟ್ ಅಳವಡಿಸಿಯೂ ಯಾವುದೇ ಉಪಯೋಗಕ್ಕೆ ಭಾರದ ಸ್ಥಿತಿಯಾಗುತ್ತಿದೆ. ಆದುದರಿಂದ ತಾಂತ್ರಿಕವಾಗಿ ಅನುಮೋದಿತ ನಕಾಶೆ ಹಾಗೂ ವರದಿಯ ಪ್ರತಿಯನ್ನು ನೀಡುವಂತೆ ಮನೆವಿ ಪತ್ರದಲ್ಲಿ ಕೋರಿರುವುದು ಮುಂದಿನ ದಿನಗಳಗಳಲ್ಲಿ ದುರ್ಗಾ ಗ್ರಾಮ ಪಂಚಾಯತ್ ಹಾಗೂ ಕಾರ್ಕಳ ಪುರಸಭೆ ನಡೆ ಯಾವ ರೀತಿಯಲ್ಲಿ ಇರುವುದೆಂದು ಕಾದು ನೋಡಬೇಕಾಗಿದೆ.
"ಪುರಸಭೆಯ ಜನತೆಗೆ ಸ್ವರ್ಣ ನದಿಯ ನೀರು ಆಸರೆಯಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಿಂಡಿಅಣೆಕಟ್ಟಿನ ಪರಿಸರದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಪ್ರತಿವರ್ಷದ ಅದಾಯ ನಷ್ಟ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯತ್ನ ಗಮಕ್ಕೆ ತಂದು, ಗ್ರಾಮಸ್ಥರ ವಿಶ್ವಾಸದೊಂದಿಗೆ ಹೆಚ್ಚುವರಿ ಕಾಮಗಾರಿ ಮುಂದುವರಿಸಬೇಕು" ಎಂದು ದುರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಹೇಳಿದ್ದಾರೆ