ಮಂಜೇಶ್ವರ ಮಾ 27 (DaijiworldNews/MS): ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ಮತ್ತು ೫೦ ಗ್ರಾಂ ಮಾದಕ ವಸ್ತುವನ್ನು ಮಾ.26 ರ ಶುಕ್ರವಾರ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು , ಮೂವರು ಪರಾರಿಯಾಗಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಮಜೀರ್ ಪಳ್ಳ ಕೊಳ್ಯೂ ರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದು, ಓರ್ವನನ್ನು ಬೆನ್ನಟ್ಟಿ ಹಿಡಿದರೂ ಇತರ ಮೂವರು ಪರಾರಿಯಾದರು. ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಮತ್ತು ಎಂ . ಡಿ ಎಂ . ಎ ಮಾದಕ ವಸ್ತು ಪತ್ತೆಯಾಗಿದೆ