ಮಂಗಳೂರು, ಮಾ. 26(DaijiworldNews/HR): ಸ್ಕೂಟರ್ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಮೂವರು ತಡೆದು, ಆತನಿಂದ 16.2 ಲಕ್ಷ ರೂ. ಕದ್ದ ನಂತರ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿದೆ.
ಮಾರ್ಚ್ 26 ರ ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಮೊಹಮ್ಮದ್ ರಿಫಾತ್ ಅಲಿ, ಅಸ್ಫಕ್ ಯಾನೆ ಜುಟ್ಟು, ಜಾಫರ್ ಸಾಧಿಕ್, ಮೊಹಮ್ಮದ್ ಇಸ್ಮಾಯಿಲ್ ಮತ್ತು ಮಯ್ಯದಿ ಎಂಬವರನ್ನು ಬಂಧಿತರೆಂದು ಗುರುತಿಸಲಾಗಿದೆ.
ಇನ್ನು ಬಂಧಿತರಿಂದ 95,000 ರೂ, ಬೈಕು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
"ಹವಾಲಾ ದಂಧೆಯ ಕಿಂಗ್ಪಿನ್ ಅನ್ನು ಇನ್ನೂ ಬಂಧಿಸಲಾಗಿಲ್ಲ. ಅವರು ಏಜೆಂಟರಾಗಿರುವ ದೂರುದಾರ ಅಬ್ದುಲ್ ಸಲಾಮ್ಗೆ ದೊಡ್ಡ ಮೊತ್ತದ ಹಣವನ್ನು ಹಸ್ತಾಂತರಿಸಿದ್ದರು.
"ದೂರುದಾರನು ತನ್ನ ಕುಟುಂಬದೊಂದಿಗೆ ಪರಾರಿಯಾಗಿದ್ದು, ಈ ಪ್ರಕರಣದಲ್ಲಿ ಇನ್ನೂ 6 ರಿಂದ 7 ಜನರನ್ನು ಇನ್ನೂ ಬಂಧಿಸಲಾಗುವುದು ಮತ್ತು ತನಿಖೆ ಪ್ರಗತಿಯಲ್ಲಿದೆ. ಮೊಹಮ್ಮದ್ ರಿಫಾತ್ ವಿರುದ್ಧ ಮೂರು, ಅಶ್ಫಾಕ್ ವಿರುದ್ಧ ಮೂರು ಮತ್ತು ವಿವಿಧ ಪೊಲೀಸ್ ಠಾಣೆಗಳಲ್ಲಿ ಇಸ್ಮಾಯಿಲ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಇದು ಹವಾಲ ಹಣವಾಗಿದ್ದು, ದೂರುದಾರನು ದರೋಡೆ ನಾಟಕವಾಡಿದ್ದು ಬೆಳಕಿಗೆ ಬಂದಿದೆ. ಇದು ಬಹುಕೋಟಿ ಹವಾಲಾ ಜಾಲವಾಗಿದ್ದು ದೂರುದಾರ ಅಬ್ದುಲ್ ಸಲಾಮ್, ಹವಾಲಾ ಹಣ ಸಾಗಿಸುವ ಏಜೆಂಟ್ ಆಗಿದ್ದ. 16.20 ಲಕ್ಷ ರೂ ಹಣವನ್ನು ಅವರು ಸಾಗಾಟ ಮಾಡುತ್ತಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.