ಮಂಗಳೂರು, ಮಾ. 26(DaijiworldNews/HR): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಅಕ್ರಮ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರೊಬ್ಬರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮದ್ ಕಲ್ಲಾರ್ ಎಂಬವರು ದುಬೈನಿಂದ ಆಗಮಿಸಿದ್ದು, ಒಳ ಉಡುಪುಗಳಲ್ಲಿ ಸರಪಳಿಯ ರೀತಿಯಲ್ಲಿ 1.23 ಕೆ.ಜಿ ತೂಕದ 57,14,940 ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯ ನೇತೃತ್ವವನ್ನು ಜಿಲ್ಲಾಧಿಕಾರಿ ಡಾ. ಕಪಿಲ್ ಗಡೆ ಐಆರ್ಎಸ್ ವಹಿಸಿದ್ದು, ಅವರೊಂದಿಗೆ ಶ್ರೀಕಾಂತ್ ಕೆ, ನಾಗೇಶ್ ಕುಮಾರ್, ನವೀನ್ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳಾಗಿ ನಿರ್ವಹಿಸಿದ್ದಾರೆ.