ಮಂಗಳೂರು ಮಾ 26 (DaijiworldNews/MS): ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ ಅವರು, " ತನಗೆ ಜೀವ ಬೆದರಿಕೆ ಇದ್ದು ಪೋಲೀಸ್ ರಕ್ಷಣೆ ನೀಡಬೇಕು" ಎಂದು ನಗರದ ಕದ್ರಿ ಹಾಗೂ ಬಂಟ್ವಾಳ ನಗರ ಠಾಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ದಿವಂಗತ ಮುತ್ತಪ್ಪ ರೈ ಪುತ್ರರು ಹಾಗೂ ಬೆಂಗಳೂರಿನ ರೌಡಿಗಳಾದ ಒಂಟಿ ರೋಹಿತ್ ಮತ್ತು ಸೈಲೆಂಟ್ ಸುನೀಲ ನನ್ನನ್ನು ಕೊಲ್ಲಲು ಸಂಚು ನಡೆಸಿದ್ದಾರೆ. ಹೀಗಾಗಿ ಪೊಲೀಸರು ರಕ್ಷಣೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ರಾಕೇಶ್ ಮಲ್ಲಿ ಈ ಹಿಂದೆ ಮುತ್ತಪ್ಪ ರೈ ಅವರೊಂದಿಗೆ ಗುರುತಿಸಿಕೊಂಡಿದ್ದರು ಅವರ ಕೊನೆಗಾಲದಲ್ಲಿ ಅವರಿಂದ ದೂರವಾಗಿದ್ದರು.