ಉಡುಪಿ, ಮಾ. 25 (DaijiworldNews/SM): ಇಂಧನ, ಗ್ಯಾಸ್ ಬೆಲೆ ಗಗನಕ್ಕೇರುತ್ತಿದೆ. ಆದರೆ ಈಗ ಸಂಸದೆ ಶೋಭಾ ಕರಂದ್ಲಾಜೆಯಾಗಲಿ, ಲೋಕಸಭೆ ಸದಸ್ಯರು ಯಾರು ಮಾತನಾಡುತ್ತಿಲ್ಲ. ಮಲ್ಪೆ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ ಏರಿ ಏಳು ವರ್ಷಗಳೇ ಕಳೆದಿವೆ ಆದರೆ ಇಲ್ಲಿಗೆ ಬಂದ ಅನುದಾನ ಬೇರೆ ಕಡೆಗೆ ವಿನಿಯೋಗ ಆಗ್ತಿದೆ. ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಟೀಕಿಸಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅನ್ವಯವಾಗುವಂತೆ, ನಾವು ಜನಸಂಪರ್ಕ ಸಭೆಯನ್ನು ನಡೆಸಿ ಜನಾಭಿಪ್ರಾಯ ಕಲೆ ಹಾಕಿ ಒಂದು ವರದಿ ತಯಾರಿಸಿದ್ದೆವು. ಆದರೆ ಅದನ್ನು ಕಸದ ಬುಟ್ಟಿಗೆ ಎಸೆದರು. ಕಸ್ತೂರಿ ರಂಗನ್ ವರದಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಯಿತು.
ಕಾಂಗ್ರೆಸ್ ಆಡಳಿತದಲ್ಲಿರುವಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿ ಕಾರ್ಮಿಕರಿಗೆ ಭೂಮಿ, ಕುಡಿಯುವ ನೀರಿನ ವ್ಯವಸ್ಥೆಗೆ ಸ್ವಜಲಧಾರೆ ಯೋಜನೆ, ಬಡವರಿಗೆ ಬಿಪಿಎಲ್ ಕಾರ್ಡ್, ಬಡಗುಬೆಟ್ಟುವಿನಲ್ಲಿ ಒಂದು ಕೋಟಿ ರೂಪಾಯಿಯ ಟ್ರೀ ಪಾರ್ಕ್ ಹೀಗೆ ಅನೇಕ ಯೋಜನೆಯನ್ನು ಹಮ್ಮಿಕೊಂಡು ಅತೀ ಹೆಚ್ಚು ಅನುದಾನವನ್ನು ಜಿಲ್ಲೆಗೆ ಪಡೆದು ಕೊಂಡಿದ್ದೆವು ಎಂದು ಸೊರಕೆ ನೆನಪಿಕೊಂಡರು.