ಕಾಸರಗೋಡು, ಮಾ. 25 (DaijiworldNews/SM): ನಗರದ ಹೊರ ವಲಯದಲ್ಲಿರುವ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಚೌಕಿ ಕುನ್ನಿಲ್‘ನ ಅಬ್ದುಲ್ ಮಶೂಕ್(30) ಬಂಧಿತ ಆರೋಪಿ. ಮನೆಗೆ ಬಂದಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚೆಂಗಳ ಸಂತೋಷ್ ನಗರದಲ್ಲಿ ಐದು ಲಕ್ಷ ರೂ. ದರೋಡೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.